Tuesday, October 30, 2007

ಮರಳಿ ಬರಲಿ ಆ ಸವಿ ದಿನಗಳು.

ಇವತ್ತ ನನಗ ಭಾಳ ಅಂದ್ರ ಭಾಳ ಖುಷಿ ಆತಾ ಗೊತ್ತು, ಎಷ್ಟೊ ದಿನಾ ಆದ ಮ್ಯಾಲೆ ಇವತ್ತ ನಾನ ಬಸ್ಸದ ಹಾರ್ನ ಕೆಳಿಶಿಕೊನ್ನಿ.
ಅದರಾಗ ಎನ ಆ ಪರಿ ವಿಶೇಷ ಐತಿ ಅನ್ನಾತೇರಿ ಎನ...ಅದಪಾ ಅದ ವಿಶೇಷ ಮದಲ ನಾವ ಸನ್ನಾಗ ಇರತಾಗ ಬಸ್ಸನ್ಯಾಗ ಅಥವಾ ಸನ್ನ ಗಾಡಿವಳಗ ಕೈಲೆ ಹಾರ್ನ ಮಾಡತಿರ್ರಲಾ, ರಬ್ಬರದ ಹಾರ್ನ - ಗಾಡಿ ಸ್ಟೆರಿಂಗ ಬಾಜುಕನ ಇರತಿತ್ತಾ , ಗಾಡಿ ಸ್ಟಾಪಗೆ ಬಂದ ಮ್ಯಾಲೆ.."ಪಾ೦ ಪಾ೦" ಅಂತ ಅವಾಜ ಮಾಡತಿತ್ತಾ ಲಾ ಹಾ೦ ಹಾ೦ ಅದ ಅದ. ಅದನ್ನ ಕೇಳಿನಿ ಎಪ್ಪಾ ಮನಸ್ಸಿಗೆ ಎಷ್ಟ ಸಂತೋಷ ತಂದ ಕೋಟ್ಟಿತ್ತಾ ಅದರ ಧ್ವನಿ ಗೊತ್ತಾ...ಭಾಳ ಖುಷಿ ಆತ...

ಒಂದ ಸಲಾ ನನಗ ಅನಿಸಿತಾ ಮತ್ತ ಯಾಕ ಈ ಸಮಯ ಹಿಂದ ಹೋಗಬಾರದಾ, ಮತ್ತ ಯಾಕ ನಾವೆಲ್ಲರು ೧೯೮೦ ಇಸವಿಗೆ ಹೊಗಬಾರದಾ, ಮತ್ತ ಯಾಕ ನಾವೆಲ್ಲಾ ಸನ್ನ ಸನ್ನ ಮಾತಿಗೆ ಹಿಂದ ಮುಂದ ವಿಚಾರ ಮಾಡಲ್ಲದನ ಮನಸ್ಸ ತುಂಭಾ ನಗಬಾರದಾ, ಮತ್ತ ಯಾಕ ನಾವ ರಾತ್ರಿ ಸ್ಟಾಪ ಆಡಬಾರದಾ, ಮತ್ತ ಯಾಕ ಲಡ್ಡು ಲಡ್ಡು ತಿಮ್ಮಯ್ಯಾ ಎನ ಬೇಕ ಮಲ್ಲಯ್ಯಾ ಆಡಬಾರದಾ, ಮತ್ತ ಯಾಕ ಮತ್ತ ಯಾಕ.....

ನಮ್ಮ ಈ ಗಡಿಬಿಡಿ ಜೀವನನ್ಯಾಗ ಎಶ್ಟೋ ಚಿಕ್ಕ ಪುಟ್ಟ ಸಂತೋಷದ ಸನ್ನಿವೇಶಗಳನ್ನು ಮರತ ಹೋಂಟೇವಿ ಅಥವಾ ಅತರ ಕಡೆ ಗಮನನ ಕೋಡವಾಲ್ಯು ಅಥವಾ ಕಳೆದುಕೋಲ್ಲಾತೇವಿ....ಇವತ್ತ ನೋಡ್ರಿ ನಾನ ಮೊಬೈಲನ್ಯಾಗ ಹಾಡಾ ಕೇಳಕೋಂತ ಕುಂತಿರಾಕಿಲ್ಲಾ ನಮ್ಮ ಕಂಪನಿ ಕ್ಯಾಬನ್ಯಾಗ ಅದಕ್ಕಾ ಆ ಹಾರ್ನ ಧ್ವನಿ ಕೇಳಿಸಿಕ್ವಾಕ ಸಾಧ್ಯ ಆತ, ಇಲ್ಲಾ ಅಂದ್ರ ಇವತ್ತನು ನಾನ ಪ್ರತಿದಿನಾ ಇದ್ದಂಗ ಇರತಿನ್ನಿ..ಇಶ್ಟ ಖುಷಿ ನನಗ ಆಗತಿರಾಕಿಲ್ಲಾ ಸದೆಕ.

ಜೀವನದಲ್ಲಿ ಕಳೆದುಹೋದ ಮಧುರ ಕ್ಷಣಗಳು ಮತ್ತ ವಾಪಸ ಬರುದಿಲ್ಲ, ಪ್ರತಿ ಕ್ಷಣಾನು ಭಾಳ ಮುಖ್ಯ. ಅದಕ್ಕ ನಾವೇಲ್ಲಾರು ಪ್ರತಿ ಕ್ಷಣವನ್ನು ಪ್ರೀತಿಯಿಂದ, ಸಂತೋಷದಿಂದ ಕಳೆಯಲು ಪ್ರಯತ್ನಿಸಬೇಕು.

Wednesday, August 15, 2007

ಜಾನು ಮತ್ತು ಚಿನ್ನು ಗುಬ್ಬಿ




ಚಿನ್ನು ಗುಬ್ಬಿ (ಮೋಹಕ ರಂಗು ರಂಗಿನ ಮಾತಿನಮಲ್ಲ)

ಜಾನು ಗುಬ್ಬಿ (ಸರಳ ಮತ್ತು ಮುಗ್ದ ಮನಸ್ಸಿನ ಸುಂದರ ಸೊಬಗಿನ ರಾಜಕುಮಾರಿ)



ಚಿನ್ನು ಸುಖಪುರುಷಾರ್ಥ ಗುಬ್ಬಿ, ಸದಾ ತನ್ನ ಮೊಗದ ಮೇಲೆ 3 ಇಂಚಿನ ನಗುವನ್ನು ಇಟ್ಟುಕೊಂಡು ಬೇರೆಯವರಿಗೆ 6 ಇಂಚಿನ ನಗುವನ್ನು ಕೊಡುವ ಅಪರಂಜಿ ಮನಸ್ಸಿನದು. ತನ್ನ ತಂದೆ/ತಾಯಿ ಮತ್ತು ಆತ್ಮೀಯ ಗೆಳೆಯ/ಗೆಳತಿಯರೊಂದಿಗೆ ನಗು, ನಗುತಾ/ನಲಿಯುತ್ತಾ ಅನ್ಯೋನ್ಯವಾಗಿ ತನ್ನ ಜೀವನವನ್ನು ಸಾಗಿಸುತ್ತಾ ಇತ್ತು. ವಾಸಿಸಲು ಹೂದೋಟದ ಮಧ್ಯೆ ಆಕಶಗಲಕ್ಕೆ ಬೆಳೆದು ನಿಂತಿರುವ ಒಂದು ಚಿಕ್ಕ ಹೂವ್ವಿನ ಗಿಡದಲ್ಲಿ ಚಿಕ್ಕ ಮತ್ತು ಚೊಕ್ಕದಾಂತಹ ಸುಂದರ ಗೂಡು. ದಿನವಿಡಿ ತನ್ನ ಗೆಳೆಯ/ಗೆಳತಿಯರೊಂದಿಗೆ ಒಂದು ಹೂದೋಟದಿಂದ ಇನ್ನೊಂದ ಹೂದೋಟಕ್ಕೆ, ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುತ್ತ, ಜಿಗಿಯುತ್ತ, ತನ್ನ ಮಧುರ ಕಂಠದಿಂದ ಸೊಗಸಾದ ಹಾಡುಗಳನ್ನು ಹಾಡುತ್ತಾ ಕಾಳುಗಳನ್ನು ಶೇಖರಿಸುತ್ತಾ ಕಾಲವನ್ನು ಕಳೆಯುತಿತ್ತು.

ಒಂದು ದಿನ ಬೆಳಿಗ್ಗೆ ತಾಯಿ ಗುಬ್ಬಿ ಚಿನ್ನುಗೆ ಕಾಳಿನ ಮಾರುಕಟ್ಟೆಗೆ ಹೋಗಿ ಅಕ್ಕಿ ಕಾಳುಗಳನ್ನು ತೆಗೆದುಕೊಂಡು ಬಾ ಅಂತ ಹೇಳಿ ಕಳುಹಿಸಿತು. ಚಿನ್ನು ಎಂದಿನಂತೆ ರಂಗು ರಂಗಿನ ಶರ್ಟ/ಪ್ಯಾಂಟನ್ನು ಹಾಕಿಕೊಂಡು ತಯಾರಾಗಿ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹಾರುತ್ತಾ ಸ್ವಲ್ಪ ದೂರದಲ್ಲಿಯೇ ದೊಡ್ಡ ಆಲದ ಮರದ ಮೇಲೆ ಇದ್ದ ಮಾರುಕಟ್ಟೆಯನ್ನು ತಲುಪಿತು. ಹಾಗೆ ಮಾರುಕಟ್ಟೆಯಲ್ಲಿ ವಿಹರಿಸುತ್ತಾ,ಉತ್ತಮ ದರ್ಜೆಯ ಅಕ್ಕಿ ಕಾಳನ್ನು ಹುಡುಕುತ್ತಾ ಹೋಗುತ್ತಾ ಇದ್ಡಾಗಾ ಒಮ್ಮೆಲೇ ಚಿನ್ನುವಿಗೆ ಕಣ್ಣುಗಳು ಕುಕ್ಕುವ ಹಾಗೆ ದೂರದಲ್ಲಿ ಒಂದು ಹೊಳಪಿನ ಬಿಂದು ಕಂಡಂತಾಯಿತು, ತನ್ನ ಕಣ್ನಗಳನ್ನು ತಿಕ್ಕಿಕೊಳ್ಳುತ್ತಾ ಚಿನ್ನು ಆ ಹೊಳೆಯುವ ಬಿಂದುವನ್ನೇ ಹಿಂಬಾಲಿಸುತ್ತಾ ಹೊರಟು ನಿಂತಿತ್ತು. ಅದು ಏನೋ ಒಂದು ಚುಂಬಕ ಶಕ್ತಿ ಆ ಹೊಳಪಿನ ಬಿಂದುವಿನಲ್ಲಿತ್ತೋ, ಚಿನ್ನುನನ್ನು ತನ್ನ ಕಡೆ ಎಳೆದುಕೊಳ್ಳುತಿತ್ತು. ಸ್ವಲ್ಪ ದೂರ ಹೋದ ಮೇಲೆ ಚಿನ್ನು ಆಶ್ಚರ್ಯಚಕಿತವಾಗಿ ಅಲ್ಲೇ ನಿಂತಲ್ಲೇ ನಿಂತು ಬಿಟ್ಟಿತು ಕಾರಣ ಅದರ ಮುಂದೆ ಒಂದು ತಿಳಿ ಹಳದಿ ಬಣ್ಣದ ಸೀರೆಯನ್ನುಟ್ಟು ಕೊಂಡ ಪುಟ್ಟ ಹೆಣ್ಣು ಗುಬ್ಬಚಿ ಮುಂದೆ ನಿಂತಿತ್ತು, ಹಣೆಯಲಿ ಚಂದಾಮಾಮನಾಕಾರದ ಕುಂಕುಮ, ಜಡೆಯಲಿ ೧ ಮಳದ ಸುಮಧುರ ಸುಹಾಸನೆ ಬೀರುವ ಸೂಜಿ ಮಲ್ಲಿಗೆ, ಮುಗಿನಲ್ಲಿ ಚಿಕ್ಕದೊಂದು ನತ್ತು, ಕಿವಿಯಲ್ಲಿ ಒಲೆಗಳು.. ಆಹಾ!! ನೋಡಲು ದೇವಲೋಕದಿಂದ ಭೂವಿಗಿಳಿದ ಅಪ್ಸರೆನೇ ಸರಿ.
ಆ ಗುಬ್ಬಚಿಯ ಮೊಗದಲ್ಲಿ ಅದು ಏನೋ ಒಂದು ಆಕರ್ಷಣೆ ಇತ್ತು, ಸುಂದರತೆಯ ದೇವತೆ ಆದ ಆ ಗುಬ್ಬಚಿಯ ಮೊಗದಲ್ಲಿ ಮುಗ್ದತೆಯೂ ತುಂಬಿ ತುಳುಕುತ್ತಾ ಇತ್ತು. ಗುಬ್ಬಚಿಯ ಕಿವಿಯಲ್ಲಿಯ ಓಲೆಗಳು ಲಕಾಲಕನೆ ಹೊಳೆಯುತ್ತಾ ಇದ್ದವು. ಹೊಳೆಯುವ ಬಿಂದು ಇದೆ ಅಂತ ಗೊತ್ತಾದ ಮೇಲೆ ಚಿನ್ನು ಆ ಗುಬ್ಬಚಿಯ ಮೊಗವನ್ನು ಸವಿಯುತ್ತಾ ಹಾಗೆ ಸ್ವಲ್ಪ ಹೊತ್ತು ಅಲ್ಲೇ ನಿಂತಿತು, ಆಮೇಲೆ ಒಮ್ಮೆಲೇ ಕನಸಿನ ಲೋಕದಿಂದ ಹೊರಬಂದಾಗ ತನ್ನ ಮುಂದೆ ಆ ಗುಬ್ಬಚಿಯನ್ನು ಕಾಣದಿದ್ದಾಗ, ಅದಕ್ಕೆ ತನ್ನ ಕಾಲಿನ ಕೆಳಗಿನ ಭೂಮಿಯೇ ಒಮ್ಮೆಲೇ ಕುಸಿದಂತಾಯಿತು, ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು. ಚಿನ್ನುಯಿನ ಕಣ್ಣುಗಳು ಗುಬ್ಬಚಿಯನ್ನು ಇಡೀ ಮಾರುಕಟ್ಟೆಯ ಪ್ರತಿಯೊಂದು ಅಂಗಡಿಯಲ್ಲಿ, ಆ ಆಲದ ಮರದ ಪ್ರತಿಯೊಂದು ಟೊಂಗೆಯಲ್ಲಿ 4-5 ಬಾರಿ ಹುಡುಕಿದವು. ಆದರೆ ಆ ಗುಬ್ಬಚಿಯೂ ಕೊನೆಗೂ ಕಾಣಲೇ ಇಲ್ಲ. ನೊಂದ ಚಿನ್ನು, ತಾಯಿ ಹೇಳಿದ ಹಾಗೆ ಅಕ್ಕಿ ಕಾಳನ್ನು ತೆಗೆದುಕೊಂಡು ಮರಳಿ ಮನೆಗೆ ಬಂತು. ಮನೆಗೆ ವಾಪಸ ಆದಾಗ ತಾಯಿ ಯಾಕೋ ಚಿನ್ನು ಇಷ್ಟು ತಡ ಮಾಡಿದೆ ಅಲ್ಲಾ, ಏನಾಯಿತು ಅಂತಾ ಕೇಳಿತು. ಆದ್ರೆ ಚಿನ್ನು ಏನು ಉತ್ತರ ಕೊಡದೇ ತನ್ನ ಕೊಣೆಗೆ ಹೊರಟು ಹೋಯಿತು. ಅವತ್ತು ಪೂರ್ತಿ ರಾತ್ರಿ ಚಿನ್ನು ಮಲಗಲೇ ಇಲ್ಲಾ. ಪ್ರತಿ ಕ್ಷಣವು ಆ ಗುಬ್ಬಚಿದೇ ಧ್ಯಾನ, ಕಣ್ಣು ಮುಚ್ಚಿದರೆ, ಕಣ್ಣು ತೆರೆದರೆ ಅದೇ ಗುಬ್ಬಚಿಯ ಮುಖವೂ ಕಣ್ಣ ಮುಂದೆ ಬಂದತ್ತಾಗುತ್ತಾ ಇತ್ತು, ಆ ಸುಂದರವಾದ ಮುಖ ಕಣ್ಣ ಮುಂದೇನೇ ಬಂದು ಕಾಡುತ್ತಾ ಇತ್ತು.ನಿದ್ದೇನೆ ಬರದೇ ಹಾಗೆ ಸ್ವಲ್ಪ ಹೊತ್ತು ಹಾಸಿಗೆಯಲ್ಲಿಯೇ ವದ್ದಾಡುತ್ತಾ, ಚಡಪಡಿಸುತ್ತಾ ಕಾಲ ಕಳೆಯಿತು.ಎನೇ ಆಗಲಿ ನಾಳೆ ಮತ್ತೆ ಆ ಮಾರುಕಟ್ಟೆಗೆ ಹೋಗಿ ಆ ಗುಬ್ಬಚಿಯ ಬಗ್ಗೆ ಇನ್ನಷ್ಟು ವಿವರವನ್ನು ತಿಳಿದೂಕೊಬೇಕೆಂದು ನಿರ್ಧರಿಸಿ ನಿದ್ರಾವಸ್ತೆಯಲ್ಲಿ ಹೋಯಿತು.

ಮರುದಿನ ಚಿನ್ನು ಸೂರ್ಯ ತನ್ನ ಬೆಳಕಣ್ಣು ಭೂಮಿಗೆ ಚಿಮ್ಮುವ ಮೊದಲೇ ಎದ್ದು ಬೇಗನೆ ತಯಾರ ಆಗಿ, ತಾಯಿಗೆ ಇಲ್ಲೇ ಹೊರಗಡೆ ಗೆಳೆಯನಿಗೆ ಭೇಟಿ ಆಗಿ ಬರುತ್ತೇನೆ ಎಂದು ಹೇಳಿ ಮಾರುಕಟ್ಟೆಯ ದಿಕ್ಕಿನಲ್ಲಿ ಹಾರಿತು. ನಿನ್ನೆ ಎಲ್ಲಿ ಆ ಗುಬ್ಬಚಿಯೂ ಸಿಕ್ಕಿತಲ್ಲಾ ಅಲ್ಲೇ ಹೋಗಿ ಅದರ ದಾರಿ ಕಾಯುತ್ತಾ ನಿಂತಿತು. ಮನಸ್ಸಿನಲ್ಲಿ ಏನೋ ಒಂದು ಕಳವಳ (ಗುಬ್ಬಚಿಯೂ ಬರುತಾಳೆಯೇ ಈ ದಿನವೂ, ಬಂದರೆ ನಾನು ಏನು ಅಂತಾ ಮಾತಾಡಲಿ... ಮೊದಲು ಹೆಸರು ಕೇಳಲಾ? ಅಥವಾ ತನ್ನ ಮನಸ್ಸಿನಲ್ಲಿ ಇರುವ ಭಾವನೆಯನ್ನು ಮನಸ್ಸು ಬಿಚ್ಚಿ ಹೇಳಿ ಬಿಡಲೋ? ಅಂತ ಪೆಚಾಡತಾ ಇತ್ತು).

ಸ್ವಲ್ಪ ಸಮಯದ ನಂತರ ಚಿನ್ನು ಅಂದಕೊಂಡ ಹಾಗೆ ಆ ಗುಬ್ಬಚಿ ನಿನ್ನೆ ಬಂದ ಸಮಯಕ್ಕೆ ಸರಿಯಾಗಿ ಮಾರುಕಟ್ಟೆಗೆ ಬಂದಿತು.ಅದನ್ನು ಕಂಡ ಚಿನ್ನುವಿಗೆ ಏನಿಲ್ಲದ ಖುಷಿಯು ಮನಸ್ಸಿನಿಂದ ಉಕ್ಕಿ ಹರಿಯಲಾರಂಬಿಸಿತು. ಆ ಗುಬ್ಬಚಿಯೂ ಸಹ ಚಿನ್ನುವನ್ನು ಓರೆ ನೋಟದಿಂದ ನೋಡಿ ಮನಸ್ಸಿನಲ್ಲಿಯೇ ನಗುತ್ತಾ ಮುಂದೆ ಹೋಯಿತು.ಹಸಿರು ಧ್ವಜ ಕಾನಿಸಿದ ಮೇಲೆ ಗುಬ್ಬಚಿಯ ಹಿಂದೆ ಹಾಗೆ ಸ್ವಲ್ಪ ಹೊತ್ತು ತಿರುಗಿದ ಚಿನ್ನು ಕೊನೆಗೂ ಧೈರ್ಯ ಮಾಡಿ ಆ ಗುಬ್ಬಚಿಯನ್ನು ಕೇಳೆ ಬಿಡೋಣ ಅಂತ ಆ ಗುಬ್ಬಚಿಯ ಹಿಂದೆ ಹೋಗಿ ಮೆಲ್ಲನೆ ಧ್ವನಿಯಲ್ಲಿ....

ಚಿನ್ನು: ರೀ ರೀ ....

ಗುಬ್ಬಚಿ (ತಿರುಗಿ ವಳ್ಳಿ ಒಂದು ಮುಗ್ದವಾದ ನಗೆಯನ್ನು ಕೊಟ್ಟು ): ಎನರೀ?

ಚಿನ್ನು (ಕೈಯಲ್ಲಿ ಸೂಜಿ ಮಲ್ಲಿಗೆಯನ್ನು ಹಿಡಿದುಕೊಂಡು) : ಇ ಸೂಜಿ ಮಲ್ಲಿಗೆಯೂ ನಿಮ್ಮದೆನಾ?

ಗುಬ್ಬಚಿ : ಇಲ್ಲಾರೀ ಅದು ನನ್ನದಲ್ಲಾ.

ಚಿನ್ನು: ಹೌದಾ..ರೀ ನೀವು ಕೋಪ ಮಾಡಿಕೊಳ್ಳಲ್ಲಾ ಅಂದ್ರೆ ನಾನು ಒಂದು ಮಾತನ್ನು ಕೇಳಲಾ?

ಗುಬ್ಬಚಿ : ಇಲ್ಲಾ ಮಾಡಿಕೊಳ್ಳಲ್ಲಾ, ಹಾಂ ಕೇಳಿ?

ಚಿನ್ನು: ನನ್ನ ಮನಸ್ಸಿನ ಅಂತರಂಗ ದಾಳದಲ್ಲಿ ಸುನಾಮಿಯ ಬ್ರಹತ್ತ ಅಲೆಗಳುನ್ನು ಹುಟ್ಟಿಸಿರುವ, ಹೃದಯದಲ್ಲಿ ಪ್ರೀತಿಯ ಪುಷ್ಪವನ್ನರಳಿಸಿದ, ನನ್ನ ಜೀವನದ ಉಸಿರಾಗುತ್ತಿರುವ ಇ ಸುಂದರ ಗುಬ್ಬಚಿಯ ನಾಮವನ್ನು ಕೇಳಲು ಇ ನನ್ನ 2 ಕೀವಿಗಳು ಕಾತುರದಿಂದ ಕಾಯುತ್ತಾ ಇವೆ, ನಿಮ್ಮ ಹೆಸರೇನು?

ಗುಬ್ಬಚಿ : ನಾಚಿಕೆಯಿಂದ, ಮೊದಲು ನಿಮ್ಮ ಹೆಸರು ಹೇಳಿ ಆಮೇಲೆ ನಾನು ನನ್ನ ಹೆಸರನ್ನು ಹೇಳುತ್ತೇನೆ.

ಚಿನ್ನು: (ಅದಕ್ಕೆ ತಟ್ಟನೆ) ನನ್ನ ಹೆಸರು "ಚಿನ್ನು" ಅಂತ.

ಗುಬ್ಬಚಿ: (ಮುಗುಳ್ನಗೆಯೊಂದಿಗೆ) "ಜಾನು".

ಚಿನ್ನು: ನೀವು ದಿನಾಲು ಈ ಮಾರುಕಟ್ಟೆಗೆ ಬರುತಿರಾ ಅಥವಾ ಹೇಗೆ?

ಜಾನು: ಹೌದು ನಾನು ದಿನಾಲು ಇಲ್ಲಿ ಸುಂದರ ಸುಂದರವಾದ ವರ್ನರಂಜಿತ ಹೂವುಗಳನ್ನು ಕೊಂಡುಕೊಂಡು ಹೋಗಲು ಬರುತ್ತೇನೆ.

ಚಿನ್ನು: ಹೌದಾ

ಜಾನು: ಆಯಿತು ನಾನು ಇನ್ನೂ ನಡೆಯುತ್ತೇನೆ ಮನೆಯಲ್ಲಿ ತಾಯಿ ಕಾಯುತ್ತಾ ಇರುತ್ತಾಳೆ. (ಅಂತಾ ಹೇಳಿ ಹಾರಿ ಹೋಯಿತು)

ಚಿನ್ನು: ಮತ್ತೆ ನಾಳಿ ಭೇಟಿ ಆಗತಿರಾ?

ಜಾನು: ಸ್ವಲ್ಪ ಮುಂದೆ ಹೋಗಿ, ಹಿಂತಿರುಗಿ ಚಿನ್ನುಕಡೆ ..ಎನು ಮಾತನಾಡದೆ ತನ್ನ ಗೊನನ್ನು "ಖಂಡಿತ ಭೇಟಿ ಆಗತೇನಿ" ಅನ್ನು ಹಾಗೆ ಅಳ್ಳಾಡಿಸಿ ತನ್ನ ಮನೆ ಕಡೆಗೆ ಹಾರಿ ಹೋಯಿತು.

ಇದನ್ನು ಕಂಡ ಚಿನ್ನು ಆಗಸದಲ್ಲಿ ಮೋಡಗಳ ಮಧ್ಯೆ ಚಂದಾಮಾಮಾ ತೇಲುವ ಹಾಗೆ ತಾನು ಸಹ ತೇಲಾಡಲು ಶುರು ಮಾಡಿದ.

ಹೀಗೆ ದಿನಾಲು ಎರಡು ಹಕ್ಕಿಗಳು ಮಾರುಕಟ್ಟೆಯಲ್ಲಿ ತಪ್ಪದೇ ಭೇಟಿ ಆಗುತ್ತಾ ಇದ್ದವು. ಪರಿಚಯದಿಂದ ಶುರುವಾದ ಸಂಭಂದ ಈಗ ಪರಿಶುದ್ದ ಪ್ರೀತಿಯಲ್ಲಿ ರೂಪಾಂತರವಾಗಿತ್ತು. ದಿನವಿಡೀ ತಮ್ಮ ಮನಸ್ಸಿನ ಅಂತರಂಗದಾಳದಲ್ಲಿ ಅಧುಮಿ ಕೊಂಡಿರುವ ಭಾವಳೆಗಳನ್ನು ಹಂಚಿಕೊಳ್ಳುತ್ತಾ ಇದ್ದವು, ತಮ್ಮಿಬ್ಬರ ನಡುವಿನ ಪ್ರೀತಿ ದಿನೇ ದಿನೇ ಹೆಚ್ಚು ಆಗಬೇಕೆ ವಿನಹ: ಎಂದೆಂದೂ ಕಡಿಮೆ ಆಗಿರಬಾರದು, ನೂರು ಜನುಮಕು ಹೀಗೆ ಎಂದು ಕೂಡಿ ಇರೋಣ, ನಮ್ಮಿಬ್ಬರ ನಡುವೆ ಕೂದಲು ಸಹ ಹಾದು ಹೋಗಬಾರದಂತಹ ಅಂತರ ವೀರಿಸಿಕೊಳ್ಳೋಣಾ ಎಂದು ಪ್ರತಿಜ್ಞೆ ಕೂಡಾ ಮಾಡಿದ್ದವು.

ಹೀಗೆ ಸಂತೋಷದ ದಿನಗಳನ್ನು ಕಳೆಯುವಾಗ ಒಂದು ದಿನ ಜಾನು ಚಿನ್ನುಗೆ ಹೇಳಿತು ನೀನು ನಮ್ಮ ತಂದೆ/ತಾಯಿ ಹತ್ತಿರ ಬಂದು ನಮ್ಮ ಮದುವೆಯ ಬಗ್ಗೆ ಮಾತಾಡು ಅಂತಾ. ಅದಕ್ಕೆ ಚಿನ್ನು ಆಯಿತು ನಾಳೆ ಬೆಳಿಗ್ಗೆ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿ ತಮ್ಮ ಮನೆಗೆ ಹೋಯಿತು. ಮಾರನೆಯ ದಿನ ಚಿನ್ನು ಜಾನುವಿನ ಮನೆಗೆ ಹೋಯಿತು. ಜಾನುವಿನ ಮನೆ ಮನೆ ನಾ ಅದು ಒಳ್ಳೆ ಮಹಲ ಥರ ಇತ್ತು.. ಆಕಶಗಲಗಿತ್ತಿರುವ ಹೂವಿನ ಮರದ ಮೇಲೆ ದೊಡ್ಡದೊಂದು ರೆಂಬೆಯ ಮೇಲೆ ವಿಶಾಲವಾದ ಹುಲ್ಲಿನಿಂದ ನೇದ ಮನೆ ಅದು. ಮನೆಯ ಸುತ್ತಿಲು ಪರಿಮಳ ಬೀರುತ್ತಿರುವ, ಭಿನ್ನ ಭಿನ್ನವಾದ ರಂಗು ರಂಗಿನ ಹೂವಿನ ಗೊಂಚಲ. ಆಹಾ ನೋಡಲು ಅದು ಒಂದು ರಾಜನ ಅರಮನೆಯೇ ಸರಿ. ಮನೆ ಒಳಗೆ ಹೋದ ಮೇಲೆ ಜಾನುನ ತಂದೆ/ತಾಯಿ ಚಿನ್ನುನನ್ನು ಆಮಂತ್ರಿಸಿದರು. ಹಾಗೆ ಮಾತನಾಡುತ್ತಾ ಚಿನ್ನುನನ್ನು ಅವನ ತಂದೆ/ತಾಯಿ, ಮನೆ, ಮಾಡುವ ಕೆಲಸದ ಬಗ್ಗೆ ಕೇಳಲಾಂಬಿಸಿದರು. ಚಿನ್ನು ನಮ್ಮ ಪರಿವಾರವು ಒಂದು ಮಧ್ಯಂ ವರ್ಗದ ಪರಿವಾರ, ನಾನು ದಿವವಿಡಿ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಕಾಳುಗಳನ್ನು ಶೇಖರಿಸುತ್ತೇನೆ ಮತ್ತು ನಮ್ಮ ತಂದೆ/ತಾಯಿಯವರಿಬ್ಬರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿತು. ಅದಕ್ಕೆ ಜಾನುನ ತಂದೆ ನೋಡಪ್ಪ ನನ್ನ ಮಗಳನ್ನು ನಾನು ತುಂಬಾ ಮುದ್ದಾಗಿ ಬೆಳೆಸಿದ್ದೇನೆ, ಆಕೆಯನ್ನು ನಾನು ಒಂದು ದೊಡ್ಡ ರಾಜಮನೆತನಕ್ಕೇನೆ ಕೊಟ್ಟು ಮದುವೆ ಮಾಡಿಕೊಡಬೇಕೆಂದು ತೀರ್ಮಾನಿಸಿದ್ದೇನೆ ಎಂದು ಹೇಳಿತು. ಅದಕ್ಕೆ ಚಿನ್ನು ನನ್ನ ಮೇಲೆ ಭರವಸೆ ಇಡೀ ನಾನು ಜಾನೂಣನ್ನು ನನ್ನ ಪ್ರಾಣಕ್ಕಿಂತ ಜಾಸ್ತಿನೆ ಪ್ರೀತಿಸುತಿದ್ದೇನೆ ಮತ್ತು ನಾನು ಆಕೆಯನ್ನು ಸುಖವಾಗಿಯೇ ನೋಡಿಕೊಳ್ಳುತೆನೆ ಎಂದೂ ಹೇಳಿತು. ಅದಕ್ಕೆ ಜಾನುನ ತಂದೆ ನೋಡಪ್ಪ ನಿನ್ನ ತಲೆ ಮೇಲೇನೆ ಇರೊಕ್ಕೆ ಒಳ್ಳೇದು ಮನೆ ಇಲ್ಲ ಅಂತಿಯ ಇನ್ನ ನನ್ನ ಮಗಳನ್ನು ಚೆನ್ನಾಗಿ ಹೇಗೆ ನೋಡಿಕೊಳ್ಳುತಿಯಾ ಅಂತ ಕೇಳಿತು. ಚಿನ್ನು, ದಯವಿಟ್ಟು ನನ್ನು ನಂಬಿ ಬೇಕಾದ್ರೆ ಜಾನುನೆ ಕೇಳಿ ನಾವು ಒಬ್ಬರ ನೊಬ್ಬರನ್ನ ಎಷ್ಟು ಪ್ರೀತಿಸುತ್ತಾ ಇದೀವಿ ಅಂತಾ. ಒಮ್ಮೆಲೇ ಜಾನುನ ಕಡೆ ತಿರುಗಿದ ಜಾನುನ ತಂದೆ ಅವನು ಹೇಳೊದೆಲ್ಲ ನಿಜಾನ ಅಂತ ಗಧರಿಸಿ ಕೆಳಿದಾ. ಆಗ ಜಾನು ತನ್ನ ತಲೆಯನ್ನು ತಗ್ಗಿಸಿ ತನ್ನ ಕಾಲ ಬೆರಳುಗಳನ್ನು ನೋಡುತ್ತಾ ಹೌದು ಅಂತ ಹೇಳಿತು. ತಂದೆಗೆ ಬೇರೇನು ದಾರಿ ತೋಚದೆ ಚಿನ್ನುಗೆ ಒಂದು ಷರತ್ತನ್ನು ಹಾಕಿದರು, ನೀನು 3 ತಿಂಗಳಲ್ಲಿ ಒಂದು ಸುಂದರವಾದಂತಹ ಮನೆ ಮತ್ತು ಬರುವ 5 ವರ್ಷಕ್ಕೆ ಆಗುವಷ್ಟು ಆಹಾರವನ್ನು ಶೇಖರಿಸಬೇಕು ಎಂದು ಹೇಳಿತು. ಚಿನ್ನು ಸ್ವಲ್ಪ ಸಮಯ ಯೋಚಿಸಿ, ನನಗೆ ಸ್ವಲ್ಪ ಜಾಸ್ತಿ ಸಮಯ ಕೊಡಿ 3 ತಿಂಗಳು ತುಂಬಾ ಕಡಿಮೆ ಆಗುತ್ತೆ, ನನಗೆ 6 ತಿಂಗಳು ಸಮಯ ಕೊಡಿ ನಾನು ನೀವು ಹೇಳಿದ್ದಾನೆಲ್ಲಾ ಖಂಡಿತವಾಗಿ ಪೂರೈಸುತ್ತೇನೆ ಅಂತ ಕೇಳಿಕೊಂಡಿತು. ಅದಕ್ಕೆ ಜಾನುನ ತಂದೆ ಆಯಿತು ನಿನಗೆ 6 ತಿಂಗಳ ಸಮಯ ಕೊಡತೇನಿ ಅಂತ ಹೇಳಿತು.

ಜಗವನ್ನೇ ಗೆಲ್ಲಲು ಸಿದ್ದವಾದ ಚಿನ್ನುವಿನ ಮನದಲ್ಲಿ ನೂರಾರು ಪ್ರಶ್ನೆಗಳು ಹುಟ್ಟಲು ಶುರುವಾದವು. ಈಗ ನಾನು ಏನು ಮಾಡಲಿ, ಏನು ಮಾಡಿದರೆ 6 ತಿಂಗಳಲ್ಲಿ ನನ್ನ ಗುರಿಯನ್ನು ಸಾಧಿಸುವೇನು ಅಂತಾ ಯೋಚಿಸುತ್ತಾ ಮರಳಿ ಮನೆಗೆ ಬಂತು. ಮನೆಯಲ್ಲಿ ತಾಯಿ ಚಿನ್ನುವಿನ ಮುಖವನ್ನು ನೋಡಿದ ತಕ್ಷಣನೇ ಕೇಳಿತು ಏನಾಯಿತು ಅಂತಾ. ಚಿನ್ನು ಏನು ಇಲ್ಲಾ ಅಮ್ಮ ಅಂತ ಹೇಳಿ ಅಲ್ಲಿಂದ ಕಳಚಿಕೊಳ್ಳಲು ಯತ್ನಿಸಿತು, ಆದರೆ ತಾಯಿಯ ಮುಂದೆ ಮುಚ್ಚಿಡಲು ಆಗದೇ ಕೊನೆಗೆ ತಾನೇ ಎಲ್ಲಾ ವಿಷಯವನ್ನು ಇದ್ದ ಇದ್ದಂಗೆ ಹೇಳಿತು. ಈಗ ನಾನು 6 ತಿಂಗಳಲ್ಲಿ 5 ವರ್ಷಕ್ಕೆ ಆಗುವಷ್ಟು ಕಾಳುಗಳನ್ನು ಶೇಖರಿಸಬೇಕು ಮತ್ತು ಒಂದು ವಿಶಾಲವಾದ ಮನೆಯನ್ನು ಕಟ್ಟಬೇಕೆಂದು ಹೇಳಿತು. ಅದಕ್ಕೆ ತಾಯಿಯ ಕಡೆಯಿಂದ ಪ್ರೋತ್ಸಾಹನೆಯನ್ನು ಕಂಡ ಚಿನ್ನು ಪೆಚ್ಚಿ ಬಿತ್ತು ಮತ್ತು ತಾಯಿಯ ಕಾಲು ಬಿದ್ದು ಆಶೀರ್ವಾದ ತೆಗೆದುಕೊಂಡು ತನ್ನ ಕೊಣೆಗೆ ಹೋಯಿತು. ದಿಟ್ಟ ಮತ್ತು ಅಛಲ ನಿರ್ಧಾರವನ್ನು ಮಾಡಿದ ಚಿನ್ನು ಪ್ರತಿ ದಿನ ಹಗಲು ಇರುಳು ಅನ್ನದೇ ಕಾಳು ಶೇಖರಿಸಲು ಶುರು ಮಾಡಿತು, ಮತ್ತೆ ಒಂದು ಸುಂದರವಾದ ಮನೆಯನ್ನು ಕಟ್ಟಲು ದಿನ 5 ಮೈಲೀ ಹಾರಿ ಹೋಗಿ ಹುಲ್ಲು ಮತ್ತೆ ಮನೆಗೆ ಬೇಕಾದ ಸಾಮಗ್ರಿಗಳನ್ನು ಪಕ್ಕದ ಊರಿನಿಂದ ತರುತಿತ್ತು. ಇದೆಲ್ಲದರಲ್ಲಿ ಚಿನ್ನು ತನ್ನ ಮುದ್ದಿನ, ಜನುಮದ ಗೆಳತಿಯಾದ ಜಾನುನನ್ನು ಅದೇ ಮೊದಲ ಬಾರಿ ಭೇಟಿ ಆದ ಮಾರುಕಟ್ಟೆಯಲ್ಲೀನೇ ಪ್ರತಿ ದಿನವು ಮರಿಯದೇ ಭೇಟಿ ಆಗುತಿತ್ತು. ಭೇಟಿ ಆದಾಗಲೊಮ್ಮೆ ಪ್ರತಿದಿನದ ಚಟುವಟಿಕೆಗಳನ್ನು ಜಾನುನ ಮುಂದೆ ಹೇಳಿಕೊಳ್ಳುತ್ತಾ ಇತ್ತು,ತಮ್ಮ ಮುಂದಿನ ಭವಿಷ್ಯದ ಬಗ್ಗೆ ಕೂಡಾ ಮಾತಾಡುತ್ತಾ ಇದ್ದವು.

ಚಿನ್ನುವಿನ ನಿಷ್ಟೇ ಮತ್ತು ಪರಿಶ್ರಮದ ಫಲದಿಂದ ಅದರ ಗುರಿಯು ತುಂಬಾ ಹತ್ತಿರ ಬಂದಿತು. ಜಾನುನ ತಂದೆ ಹೇಳಿದ ಹಾಗೆ ೫ ವರ್ಷಕ್ಕೆ ಆಗುವಷ್ಟು ಕಾಳುಗಳು, ಒಂದು ಹೊಸದಾದ ಸುಂದರ ಮನೆ ಎಲ್ಲಾ ತಯಾರಾಗಿದ್ದವು.ಇನ್ನೇನು ಕೆಲವೇ ದಿನಗಳು ಉಳಿದಿದ್ದವು ತನ್ನ ಗುರಿಯ ಸಿಹಿಯಾದ ರುಚಿಯನ್ನು ಪಡೆಯಲು.

ಒಂದು ದಿನ ಹಾಗೆ ಚಿನ್ನು ಮಾರುಕಟ್ಟೆಯಲ್ಲಿ ಜಾನುನ ದಾರಿ ಕಾಯುತ್ತಾ ಕುಳಿತಿತ್ತು, 1-2 ನಿಮಿಷ ಆದಮೇಲೆ ಜಾನು ಮಾರುಕಟ್ಟೆಯನ್ನು ಪ್ರವೇಶಿಷಿಸಿತು. ದಿನಂಪ್ರತಿ ಭೇಟಿ ಆಗುವ ಸ್ಥಳಕ್ಕೆ ಜಾನು ಬರುತ್ತಿರುವಾಗ ಒಮ್ಮೆಲೇ ಮೋಡಗಳ ನಡುವಿನಿಂದ ಒಂದು ಹದ್ದು ಬಂದು ಜಾನುನನ್ನು ತನ್ನ ಮುಷ್ಟಿಯಲ್ಲಿ ಬಂಧಿಸಿಕೊಂಡು ಆಕಾಶದಾಚೆಗೆ ಹಾರಿ ಹೋಯಿತು.ಇದನ್ನು ಕಂಡ ಚಿನ್ನುವಿಗೆ ತನ್ನ ಪ್ರಾಣವನ್ನೇ ಯಮನು ಬಂದು ಹರಣ ಮಾಡಿದಂತಾಯಿತು, ಯಾರೋ ಬಂದು ಹೃದಯಕ್ಕೇನೆ ಚೂರಿ ಹಾಕಿ ಕಿತ್ತೆಗೆದಂತಾಯಿತು. ತತಕ್ಷಣ ಚಿನ್ನು ಆ ಕ್ರೂರಿ ಹದ್ದಿನ ಹಿಂದೆ ಹಾರಿತು, ಮನಸ್ಸಿನಲ್ಲಿ ಒಂದೇ ಮಾತು "ಏನೇ ಆದರೂ ಆಗಲಿ ನಾನು ನನ್ನ ಜೀವನದ ಉಸಿರನ್ನು (ಜಾನು) ಮರಳಿ ಪಡೆದುಕೊಳ್ಳುತ್ತೇನೆ", ಮನಸ್ಸಿನಲ್ಲಿ ತಡೆದುಕೊಳ್ಳಲಾರದಷ್ಟು ನೋವನ್ನು ಅನುಭವಿಸುತ್ತಾ ಹದ್ದನ್ನು ಬೆನ್ನಟ್ಟಿ ಮುಗಿಲೇರಿಗೆ ಹಾರಿತು.

ಆ ಹದ್ದು ಮುಗಿಲೆತ್ತರಕ್ಕೆ ಚಾಚಿದ ಬೆಟ್ಟದ ತುದಿಯಲ್ಲಿರುವ ತನ್ನ ಗೂಡಿಗೆ ಜಾನುನನ್ನು ಹಾರಿಸಿಕೊಂಡು ಹೋಗಿ ತನ್ನ ಪುಟಾನಿ ಹದ್ದು ಮರಿಗಳ ಮುಂದೆ ವಗೆದು ಹಾರಿ ಹೋಯಿತು. ಜಾನು ತನ್ನ ಪ್ರಜ್ಞೆಯನ್ನು ಕಳೆದುಕೊಂಡು, ಹಾಗೆ ಆ ಮರಿಗಳ ಮುಂದೆ ಬಲಿಪಶು ಆಗಿ ಬಿದ್ದಿತ್ತು. ತನ್ನ ಮುಂದೆ ಆಹಾರವನ್ನು ಕಂಡು 2 ಮರಿ ಹದ್ದುಗಳು ತಮ್ಮಲಿಯೇ ಕಚ್ಚಾಡಲು ಶುರು ಮಾಡಿದವು. ಅಷ್ಟರಲ್ಲಿಯೇ ಚಿನ್ನು ಆ ಗೂಡಿಗೆ ಹಾರಿ ಬಂತು, ತನ್ನ ಮುಂದೆ ಮರಿ ಹದ್ದುಗಳನ್ನು ಜಾನುಗೋಸ್ಕರ ಕಚ್ಚಾಡುವುದನ್ನು ಕಂಡು ಪೆಚ್ಚಿ ಬಿತ್ತು ಚಿನ್ನು. ಒಂದು ನಿಮಿಷನು ನಿಲ್ಲದೇ ತಕ್ಷಣ ಜಾನುನನ್ನು ತನ್ನ ಕೈಯಲ್ಲಿ ಎತ್ತಿಕೊಂಡು ಆ ಗೂಡಿನಿಂದ ನೆಲಕ್ಕೆ ಹಿಂದೆ ಮುಂದೆ ಯೋಚನೆ ಮಾಡದೇನೆ ಹಾರಿತು. ತನ್ನ ಶರೀರದಲ್ಲಡಗಿರುವ ಶಕ್ತಿಯನ್ನು ಮೀರಿ ತನ್ನ ಪುಟ್ಟ ಪುಟ್ಟ ಪಕ್ಕವನ್ನು ಬಡಿಯತೊಡಗಿತು. ಆದರೆ ಮೊದಲೇ ತನ್ನೆಲ್ಲಾ ಶಕ್ತಿಯನ್ನು ಗೂಡನ್ನು ತಲುಪುವುದರಲ್ಲಿ ಕಳೆದುಕೊಂಡ ಚಿನ್ನು ತುಂಭ ಸಮಯ ಹಾರಾಡಲು ಆಗದೇ ಕೊನೆಗೆ ಜಾನುನನ್ನು ಗಟ್ಟಿಯಾಗಿ ತಬ್ಬಿಕೊಂಡು ಭೂಮಿಯತ್ತ ಉರುಳಲು ಶುರು ಮಾಡಿತು. ಚಿನ್ನು ಜಾನುವಿನ ಕಿವಿಯಲ್ಲಿ ಹೇಳಿತು,...."ಬದುಕಿದರು ನಿನ್ನೊಡನೆ, ಜೀವ ಹೋದರೂ ನಿನ್ನೊಡನೆಯೇ".

ಸೆಕೆಂಡುಗಳಲ್ಲಿ ಚಿನ್ನು ಮತ್ತು ಜಾನು ಭೂಮಿಗೆ ಬಂದು ಅಪ್ಪಳಿಸಿದವು.

ಚಿನ್ನು ಕಣ್ಣ ತೆರೆದು ನೋಡಿದಾಗ ಕಾಣಿತು ತಾವು ಒಂದು ಹೋಗೋಂಚೀಲಿನ ಮೇಲೆ ಆಕಾಶ ಮತ್ತು ಭೂಮಿಯ ಮಧ್ಯೆ ತೇಲಾಡುತ್ತಾ ಇರುವುದನ್ನ. ಜಾನುವಿಗೆ ಇನ್ನು ಪ್ರಜ್ಞೆ ಬಂದಿರಲಿಲ್ಲಾ, ತಾವಿಬ್ಬರು ಸುರಕ್ಷಿತವಾಗಿದ್ದನು ಕಂಡ ಚಿನ್ನು ಖುಷಿಯಿಂದ ಕುಪ್ಪಳಿಸಿತು. ಚಿನ್ನು ಜಾನುವಿನ ಮುಖವನ್ನು ನೋಡುತ್ತಾ ನಿಟ್ಟುಸಿರು ಬಿಟ್ಟು ಹನಿಯ ಮೇಲೆ ಒಂದು ಸಿಹಿಯಾದ ಮುತ್ತನ್ನಿಟ್ಟು ತನ್ನ ಬಾಹು ಬಂಧನದಲ್ಲಿ ತೆಗೆದುಕೊಂಡು ಜಾನುವಿನ ಮನೆಯ ಕಡೆಗೆ ಹೊತ್ತಿಕೊಂಡು ನಡೆಯಿತು. ಸ್ವಲ್ಪ ಸಮಯದ ನಂತರ ಮನೆ ತಲುಪಿದ ಚಿನ್ನು, ಜಾನುವಿನ ತಂದೆ/ತಾಯಿಗೆ ಘಟನೆಯ ಪೂರ್ಣ ವಿವರವನ್ನು ಕೊಟ್ಟಿತು. ಅದನ್ನು ಕೇಳಿದ ಜಾನುವಿನ ತಂದೆ/ತಾಯಿಯ ಕಣ್ಣಲ್ಲಿ ಆನಂದದ ಭಾಷ್ಪಗಳು ಹರಿಯಲಾರಂಭಿಸಿದವು. ನೀನೆ ನಮ್ಮ ಮಗಳಿಗೆ ಸರಿಯಾದ ಜೋಡಿ, ನಿನ್ನಷ್ಟು ಪ್ರೀತಿ ನಮ್ಮಗಳಿಗೆ ಬೇರೆ ಯಾರು ಮಾಡಲು ಸಾಧ್ಯನೆ ಇಲ್ಲಾ ಅಂತ ಹೇಳಿ, ನಮಗೆ ಈ ಮದುವೆ ಒಪ್ಪಿಗೆ ಅಂತ ಹೇಳಿದವು. ಅಷ್ಟರಲ್ಲಿಯೇ ಜಾನುವಿಗೆ ಪ್ರಜ್ಞೆ ವಾಪಸು ಬಂತು. ಜಾನು ಕಣ್ಣ ಬಿಟ್ಟು ನೊಡಿದಾಗ, ಚಿನ್ನುನನ್ನು ಕಂಡು ಕಣ್ಣೀರಿನ ನದಿಯನ್ನೇ ಹರಿಸತೋಡಗಿದಳು. ಚಿನ್ನು ಜಾನುವಿನ ಹತ್ತಿರ ಹೋಗಿ ಜಾನುನ ಕೈಯನ್ನು ತನ್ನ ಕೈಯಲ್ಲಿ ಹಿಡಿದು ಕೊಂಡು, ಕಣ್ಣೀರನ್ನು ತನ್ನ ಕೈಯಿಂದ ವರೆಸಿ ಸಮಾಧಾನ ಹೇಳಿತು.. ಆದ ಘಟನೆಯ ಬಗ್ಗೆ ಮತ್ತು ಅವರ ತಂದೆ/ತಾಯಿ ಹೇಳಿದ ಮಾತುಗಳನ್ನು ಹೇಳಿತು. ಅದನ್ನು ಕೇಳಿದ ಜಾನುವಿಗೆ ಖುಶಿಯ ಟಿಖಾನೇನೆ ಇರಲಿಲ್ಲಾ.

ಎಲ್ಲಾ ಗುರು ಹಿರಿಯರ, ತಂದೆ/ತಾಯಿಗಳ ಆಶಿರ್ವಾದದಿಂದ, ಗೆಳೆಯರ/ಗೆಳತಿಯರ ಪ್ರೀತಿಯಿಂದ ಎರಡು ಗುಬ್ಬಚಿಯ ಮದುವೆಯು ಇದೇ ವರುಷ ಮನೆಯ ಮುಂದೆ ಇರುವ ಒಂದು ದೊಡ್ಡ ಹೂದೋಟದಲ್ಲಿ ಆಗಬೇಕೆಂದು ನಿರ್ಧರಿಸಲಾಗಿದೆ.


ತಮ್ಮ ಸುಖಾಗಮನಾಭಿಲಾಷಿಗಳು,
ಚಿನ್ನು ಮತ್ತು ಜಾನು

Wednesday, June 27, 2007

ನನ್ನ ಜನುಮದಾ ಗೆಳತಿ, ಉಸಿರಿನಾ ವಡತಿ - ಸವಿ






ಜನುಮದಾ ಗೆಳತಿ......ಉಸಿರಿನಾ ವಡತಿ......ಮರೆತರೇ ನಿನ್ನಾ, ಮಡಿವೇನು ಚಿನ್ನಾ. ನನ್ನ ಉಸಿರೇ......ನನ್ನ ಉಸಿರೇ......ನನ್ನ ಉಸಿರೇ......ನನ್ನ ಉಸಿರೇ......ಜೊತೆಯಲಿ ಇರುವೇ ಎಂದು......

ಜನುಮದಾ ಗೆಳತಿ......ಉಸಿರಿನಾ ವಡತಿ......ಮರೆತರೇ ನಿನ್ನಾ, ಮಡಿವೇನು ಚಿನ್ನಾ......

ನೋವು ಇಲ್ಲದಾ ಜೀವನವೇ ಇಲ್ಲಾ ಸವಿ, ಕಂಬನಿ ಇಲ್ಲದಾ ಕಣ್ಗಳಿಲ್ಲಾ. ದು:ಖಾ ಇಲ್ಲದಾ ಮನಸ್ಸು ಇಲ್ಲವೇ, ಬರಿ ಸು:ಖವಾ ಕಂಡ ಮನುಜನಿಲ್ಲಾ. ನಮ್ಮ ಪ್ರೀತಿ ಸಾಯುದಿಲ್ಲಾ, ಅದಕೇಂದು ಸೋಲೆ ಇಲ್ಲಾ ನನ್ನಾಣೆ ನಂಬು ನನ್ನ ಉಸಿರೇ. ನನಗಾಗಿ ಜನಿಸಿದೆ ನೀನು, ನನ್ನೊಳಗೆ ನೆಲೆಸಿದೆ ನೀನು, ನೀನಗಾಗೆ ಬದುಕುವೇ ನಾನು. ನೀ ನನ್ನ ಅಗಲಿದ ಆ ಕ್ಷಣವೇ ನಾ ನೀನಗಿಂತ ಮದಲೆ ನಾ ಮಡಿವೇ.

ತಂದೆಯ, ತಾಯಿಯ ಬಿಟ್ಟು ಬಂದೆ ಸವಿ, ಇಬ್ಬರ ಪ್ರೀತಿಯ ನಾ ಕೊಡುವೇ....ನನ್ನೆದೆ ಗೂಡಲಿ ಬಂದಿಸಿ ನಾ ನೀನ್ನಾ ಗೆಳತಿ ಸಾವಿಗೂ ಅಂಜದೆ ಎದೆ ಕೋಡುವೆ....ಮಗುವಂತೆ ಲಾಲಿಸಲೇನು, ಮಡಿಲಲ್ಲಿ ತುಗಿಸಲೇನು, ಬೆಳಂದಿಗಳ ಊಟಾ ಮಾಡಿಸಲೇನು....ಕಣ್ಣ ಮುಚ್ಚಿ ಕುಳಿತರೇ ನೀನು ಕಣ್ಣಾಗಿ ಇರುವೇ ನಾನು, ಕನಸಲ್ಲು ಕಾವಲಿರುವೇ...ಕಣ್ಣೀರು ಬಂದರಿಲ್ಲಿ ಕಣ್ಮರೇ ಆಗುವೇ ನಾ...ನನಗೆ ಸವಿ ನೀನೆ ಉಸಿರು.

ಜನುಮದಾ ಗೆಳತಿ......ಉಸಿರಿನಾ ವಡತಿ......ಮರೆತರೇ ನಿನ್ನಾ, ಮಡಿವೇನು ಚಿನ್ನಾ......ನನ್ನ ಉಸಿರೇ......ನನ್ನ ಉಸಿರೇ......ನನ್ನ ಉಸಿರೇ......ನನ್ನ ಉಸಿರೇ......ಜೊತೆಯಲಿ ಇರುವೇ ಎಂದು

Friday, March 2, 2007

ನನ್ನ ಜೀವನದಲ್ಲಿ ನಾನು ಗಳಿಸಿದ ಅತ್ಯಮುಲ್ಯವಾದಂತ ಆಸ್ತಿ............

ನನ್ನ ಜೀವನದಲ್ಲಿನ ಅತ್ಯಮುಲ್ಯವಾದಂತ ಆಸ್ತಿ....ನನ್ನ ಶೇಂಗಾ/ಡವಗಾ ಗೆಳೆಯರ ಮತ್ತು ಗೆಳೆತಿಯರ ಸ್ನೇಹತನ.

ನನಗ ನನ್ನ ಮ್ಯಾಲೆ ಭಾಳ ಹೆಮ್ಮೆ ಯಾಕ ಅಂದ್ರ ನನಗ ಹಿಂತಾ ಅಮೂಲ್ಯವಾದ ಸ್ನೇಹಿತರ ಸ್ನೇಹವನ್ನ ಪಡೆದುಕೊಳ್ಳುವ ಭಾಗ್ಯ ಸಿಕ್ಕೇತಿಲಾ ಅಂತ...

ಇ ಬ್ಲಾಗನ್ಯಾಗಾ ಭಾಳ ಎನಾ ಹೇಳಾಂಗಿಲ್ಲಾ ನಮ್ಮ ತಂಡದ ಬಗ್ಗೆ ಅಶ್ಟ ಕಿರುಚಿರು ಪರಿಚಯ ಮಾಡಿಕೊಡತೇನಿ ನಮ್ಮ ಶೇಂಗಾ/ಡವಗಾ ತಂಡದ...


೧)
ಹೆಸರು: ಗಂಗಾಧರ ಹುಬಳೆಪ್ಪನವರ
ವ್ರುತ್ತಿ: ಸಿವಿಲ ಇಂಜಿನೀರ
ಉಪಾದಿಗೋಳ: ಗಂಗನ್ನಾ ಮಂಗನ್ನಾ, ಯುನಿವರ್ಸಲ್ಲ ಅಣ್ಣಾ, ಯೇ ಗಂಗ ಅ ಅ ಅ ಅ ಅ, Sr Fire Brother (ಬೆಂಕಿ ಹಚ್ಚಪ್ಪನವರ), ಬಸವನ ಕುಡಚಿ ಗ್ಯಾಂಗ Member.
ಗುಣಗಳು: ಎಲ್ಲಾರೂದ ಭಾಳ ಕಾಳಿಜಿ ಮಾಡತಾನಾ, ನಮ್ಮೆಲ್ಲರೂದೂ ಕಷ್ಟ ಕೇಳಿ ಭಾಳ ವಿಚಾರ ಮಾಡಿ ಎಲ್ಲಾರಿಗೂ ತನ್ನ ಅಭಿಪ್ರಾಯ ಹೇಳತಾನಾ ಮತ್ತ ಅದ ಸರಿನೂ ಇರತೇತಿ ಅದ ಭಾಳ ಮುಖ್ಯ, ಪಕ್ಕಾ ರವಿ ಶಂಕರ ಭಕ್ತ.
ವಿಶೇಷತೆಗಳು: ದೊಡ್ಡಾವ್ರ ಹೆಲ್ಯಾರಲ್ಲಾ ಚಿತ್ರ ಸುಳ್ಳ ಹೇಳಾಂಗಿಲ್ಲಾ ಅಂತ ಖರೆ ನೋಡ್ರಿಪಾ...ಇವನ ವಿಶೇಷತೆ ಮಂಗ್ಯಾನ ಆಟಾ ಆಡೂದ ಹಿ ಹಿ, ಆಮೇಲೆ ಒಂದ ಚಲನಚಿತ್ರ ತಗಿಬೇಕಂತ ಭಾಳ ಮನಸ ಐತಿ ಇವಂದ ಆದ್ರ ಇನ್ನ ತನಾ ಒಂದ ಕಥೆ ತಯಾರ ಇಲ್ಲಾ, ಕ್ಯಾಮೆರಾ ತಯಾರ ಇಲ್ಲಾ...ಗೊತ್ತಿಲ್ಲಾ ಯಾವ ತರಹದ ಚಿತ್ರ ತಗ್ಯಾಂವ ಅದಾನಾ ಅಂತ ಬರೆ ಲೈಟ್ಸ ಕ್ಯಾಮೆರ ಅಂತಾನ ಹಾ ಹಾ ಹಾ, ಊಟಕ್ಕ ಕುಂತಾಗ ಪಾಪಡ, ಗುಲಾಬ ಜಾಮುನ ಸ್ವಲ್ಪ ದೂರ ಇಡ್ಬೇಕ... ಪಕ್ಕಾ ತುಡಗಾ ಇಂವಾ.
ನಕಾರಾತ್ಮಕಗಳು: ಭಾಳ ಅಜಾಗರೂಕ, ಭಾಳ ಜಲ್ದಿ ಮರಿತಾನ ಯಾವ ವಸ್ತು ಎಲ್ಲಿ ಇಟ್ಟಾನಾ ಅಂತ ವಟ್ಟ ನೆನಪ ಇರಾಂಗಿಲ್ಲಾ.
ವಿಶೇಷ ಮಾತು: ಅರೇ, ಅಲ್ಲೋ ಮಾರಯ್ಯಾ, ಆಮೇಲೆ ಎಲ್ಲಾ ತೆಲಿ ಮ್ಯಾಲಿಂದ ಹಾದ ಹೋಗು ಹಂತಾವ ಮಾತಗೋಳ.
ಗಾರ್ಹಸ್ಥ್ಯ: ಏಕಜೀವಿ
ಜನ್ಮ ದಿನಾಂಕ: ಮೇ ೪
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ಶಶ್ಯಾನ ದೊಡ್ಡ ಅಣ್ಣಾ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ದೊಡ್ಡಾಂವ ಅದಾನಾ ಮದಲಾ ಸುರತ್ಕಲದಿಂತ್ರ ಎಮ. ಟೆಕ ಮಾಡ್ಯಾನ ಅಂದ್ರ ಊಫ...ಅಡ್ಜಸ್ಟ ಆಗಾಂಗಿಲ್ಲಾ ನಮ್ಮ ಜೋಡಿ......

೨.
ಹೆಸರು: ಪಲ್ಲವಿ ಖೋತ
ವ್ರುತ್ತಿ: ಸೊಪ್ಟವೇರ ಇಂಜಿನೀರ
ಉಪಾದಿಗೋಳ: ಪಲ್ಲಿ, ಪಲ್ಲಿ_ಗುಲ್ಲಿ, ಡುಮ್ಮಿ, ಪಲ್ಲ್ಯಾ, ಪಲ್ಲು.
ಗುಣಗಳು: ಹುಡಗ್ಯಾರ ತಂಡದ ಪಾಲಕರೂ, ಸಲಹೆಗಾರರೂ ವಟ್ಟಿನ್ಯಾಗ ಭಾರಿ ಹುಡುಗಿ...ವಜನ ಹೆಳಾತಿಲ್ಲ ನಾನ...ಹಿ ಹಿ...ಭಾಳ ತಿಲದಾಕಿ, ಭಾಳ ರಿಯಲಿಸ್ಟಿಕ ಆಗಿ ಯೋಚನೆ ಮಾಡಾಕಿ.
ವಿಶೇಷತೆಗಳು: ಇಕಿನ ನಗು......ಇಕಿನ ನಗು ಮ್ಯಾಲ ಅಂತಿ ಎಲ್ಲಾರೂ ಫುಲ್ಲ ಫಿದಾ..ಇಕಿ ಗಂಡನ್ನ ಹಿಡಕೊಂಡ.
ನಕಾರಾತ್ಮಕಗಳು: ದಿನಾ ದಿನಾ ಡುಮ್ಮಿ ಆಗಾತಾಳ ಖರೆ ಎನ ಮಾಡವಳ್ಳ....:-(
ವಿಶೇಷ ಮಾತು: ಲೇ ಲೇ, ವಗದ ನೋಡ, ಗಿರ್ರಿ ಗುರ್ರಿ (ನನಗ ಅಂತಾಳ).
ಗಾರ್ಹಸ್ಥ್ಯ: ಮನ್ಯಾರ ಫೆಬ್ರುವರಿ ೨೫ ಮದುವೆ ಎಂಬ ಭಂದನದಲ್ಲಿ ಭಂದಿತಳಾದಳು ಇಗ ಮಿಸೇಸ ಪಲ್ಲವಿ ಜಿನಚಂದ್ರ.
ಜನ್ಮ ದಿನಾಂಕ: ನವೆಂಬರ ೯
ನಾನ ಇಕಿನ ಪರಿಚಯ ಆಗಿದ್ದ ಹೇಂಗ: ನಮ್ಮ ಶಶ್ಯಾನ ತಂಗಿ ಕಾಂಚನನ ಕೊಲೆಜಮೆಟ್ಸ, ಇವರ ಬೆಂಗಳೊರಗಿ ಪ್ರೊಜೆಕ್ಟ ಮಾಡಾಕ ಬಂದಿರ್ರ ಅವಾಗಿಂದ ಪರಿಚಯ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಇಕೀನ್ನ ಬಗ್ಗೆ ಭಾಳ ಅಂದ್ರ ಭಾಳ ಕೇಳಿನ್ನಿ ಭೆಟ್ಟಿ ಆಗೂಕಿಂತ ಮದಲನ ಎನ ಕೇಳಿನ್ನಿ ಅದ ಎಲ್ಲಾ ಖರೆ ಇತ್ತ...ಅದನ್ನ ಮ್ಯಾಲೇ ಬರದೆನಿ

೩.
ಹೆಸರು: ಶಶೀಧರ ಹುಬಳೆಪ್ಪನವರ
ವ್ರುತ್ತಿ: ನೆಟವರ್ಕ ಇಂಜಿನೀರ
ಉಪಾದಿಗೋಳ: ಬಿ ಟುದ ಏ ಟುದ ಬಿ ಟುದ ಏ...ಬಾಬಾ, Jr Fire Brother (ಬೆಂಕಿ ಹಚ್ಚಪ್ಪನವರ), ಬಸವನ ಕುಡಚಿ ಗ್ಯಾಂಗ Member.
ಗುಣಗಳು: ಎಲ್ಲಾರದು ಬಗ್ಗೆ ವಿಚಾರ ಮಾಡತಾನ, ರೊಕ್ಕದ ಬಗ್ಗೆ ಜಾಸ್ತಿ ತೆಲಿ ಕೆಡಿಸಿಕೊಳ್ಳಾಂಗಿಲ್ಲಾ ಇವಂದಾ ದಿಲ ದರಿಯಾ ಬಾಕಿ ಸಬ ಸಮುಂದರ ಐತಿ.
ವಿಶೇಷತೆಗಳು: ಭಾಳ ಜಲ್ದಿ ದೊಸ್ತಿ ಮಾಡಕೊತಾನ, ಎಲ್ಲಾದಕ್ಕನೂ ಅಡ್ಜಸ್ಟ ಆಗತಾನ, ನಮ್ಮ ತಂಡದ ರೋಮಿಯೊ (ಇಗ ಸ್ವಲ್ಪ ಶಾಂತ ಆಗ್ಯಾನ), ತೆಲ್ಯಾಗ ಮಸ್ತ ಪೈಕಿ ಶೇಂಗಾ ವಿಚಾರಗೋಳ ಜಲ್ದಿ ಬರತಾವ ಇವಂಗ, ಎಗ್ಗಳಂಗಾ ಊಟಾ ಕಟಿತಾನಾ ಪುಲ್ಲ ಹೆಬ್ಬಾವ (ನನ್ನ ಕಟ್ಟರ ಸ್ಪರ್ಧಿ), ಮಲಕೊಂಡಾಗ ಬಾಜೂದಾವನ ಮ್ಯಾಲ ಕಾಲ ಮ್ಯಾಲ ಕಾಲ ವಗದ ಮಲಕೋತಾನ ನನ್ನ ಗತೆ ಹಿ ಹಿ, ಬ್ಯಾಟ್ಟಿಂಗ ಮಸ್ತ ಪೈಕಿ ಆಡತಾನಾ ಮತ್ತ ಸುಖಿ ಜೀವಿ ಹಾಸಿಗಿ ಮ್ಯಾಲ ಬಿದ್ದ ೧ ನಿಮಿಷ ವಳಗ ನಿದ್ದಿ ಹತ್ತತೇತಿ ಮತ್ತ ಮನಗಂಡ ಗೋರಕಿ ಹೊಡಿತಾನಪಾ ಎಪ್ಪಾ...., ಮುತ್ತಿನಂತ ಅಕ್ಶರ ಬರಿತಾನ, ಹಾಂ ಇನೋಂದ ಹಾಡಾ ಮಸ್ತ ಪೈಕಿ ಹಾಡತಾನಾ.
ನಕಾರಾತ್ಮಕಗಳು: ಭಾಳ ಅಜಾಗರೂಕ..ಅದ ಅಂತಾರಲ್ಲಾ ಹಿರಿ ಅಕ್ಕನ್ನ ತಪ್ಪು ತಪ್ಪು ಹಿರಿ ಅಣ್ಣನ ಚಾಲಿ ಮನಿ ಮಂದಿಗಿ ಎಲ್ಲಾ ಅಂತ ಅದಕ್ಕ ಸರಿಯಾದ ಉದಾಹರಣೆ.
ಗಾರ್ಹಸ್ಥ್ಯ: ಏಕಜೀವಿ.
ವಿಶೇಷ ಮಾತು:
ಜನ್ಮ ದಿನಾಂಕ: ಜೂನ ೨೪.
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ಜೊಬ ಹುಡಕ್ಯಾಡಾಕ ಅಂತ ಬೆಂಗಳೂರಗಿ ಬಂದಾಗ ನಮ್ಮ ಜೊಡಿ ರೂಮ ನ್ಯಾಗ ಇದ್ದ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಇವನೂ ಮಾತಗೋಳ ಕೇಳಿ ಪುಲ್ಲ ರೋಡ ರೋಮಿಯೊನ ಅಂತ ಅನಿಸಿತ್ತ.

೪)
ಹೆಸರು: ರವಿ ಗುರುಲಿಂಗಪ್ಪಾ ಕಟ್ಟಿಮನಿ (ನನ್ನ ಮದಲನೆ ಬೆಸ್ಟ ದೊಸ್ತ....ಸ್ಪೆಶಲ ದೊಸ್ತ)
ವ್ರುತ್ತಿ: ಹಾರ್ಡವೇರ ಇಂಜಿನೀರ
ಉಪಾದಿಗೋಳ: ರೌಡಿ ಎಮ. ಎಲ. ಎ, ಚಿ, ರಾಚು, ಜಿ. ಕೆ. ರವಿ, ವಡಗಾವಿ ಗ್ಯಾಂಗ member.
ಗುಣಗಳು: ಸೂಕ್ಶ್ಮಜೀವಿ, ನೊಡಿದ್ದ ಪಸಂದ ಬಂದಿದ್ದ ಎಲ್ಲಾ ಬೇಕ, ಸ್ವಲ್ಪ ಸೆಂಟಿ, ಪ್ರಯತ್ನವಾದಿ.
ವಿಶೇಷತೆಗಳು: ಎಲ್ಲಾರ್ನೂ ನಗಿಸಿಕೊಂತ ಇರತಾನಾ, ಎನಾರ ಕೆತ್ತೆಬಜೆ ಮಾಡತಿರತಾನ, ಬಾಯಿ ವಟ್ಟ ಗಪ್ಪ ಕುಂಡ್ರಾಂಗಿಲ್ಲಾ...ಕಟಗಿದಾ ಆಗಿತ್ತ ಅಂದ್ರ ಯಾವಗಲೊ ವಡದ ಹೊಗತಿತ್ತಾ.
ನಕಾರಾತ್ಮಕಗಳು: ನೊಡಿದ್ದ ಪಸಂದ ಬಂದಿದ್ದ ಎಲ್ಲಾ ಬೇಕ, ಸಮಯಕ್ಕ ತಕ್ಕಾಗಿ ಬದಲ ಆಗಾಂಗಿಲ್ಲಾ ಸ್ವಲ್ಪ ಸಮಯ ತೊಗೊತಾನ.
ಗಾರ್ಹಸ್ಥ್ಯ: ಏಕಜೀವಿ (ಆದ್ರ ಜಲ್ದಿ ವರಗ ಬರಬೆಕಂತ ಪ್ರಯತ್ನ ಮಾಡಾತಾನಾ)
ವಿಶೇಷ ಮಾತು: ಹರಿಶ ಪಟೇಲ, ಡ್ಯಾಂಬೊ (ನನಗ ಅಂತಾನ)
ಜನ್ಮ ದಿನಾಂಕ: ಡಿಸೆಂಬರ ೧೭
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ಇವನ ಅಣ್ಣಾ ಮಹೇಶ ನನ್ನ ಹೈ ಸ್ಕೂಲ ದೊಸ್ತ ಅವನಿಂದ ಪರಿಚಯ....
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಎನ ಊಡಾಳಾ ಅದಾನಪಾ ಇವಾಂ, ಎಶ್ಟಾರ ಮಾತಾಡತಾನಾ.

೫)
ಹೆಸರು: ಸಂಗಮಿತ್ರಾ ಸಿಂಗಿ
ವ್ರುತ್ತಿ: ಡಿಸೈನ ಇಂಜಿನೀರ.
ಉಪಾದಿಗೋಳ: ಸಂಗಮಿ, ಸಂಗು, ಅವ್ವು, ಸಂಗು_ಬಿಸ್ಲೆರಿ, ಕೂಲ_ಬಿಸ್ಲೆರಿ, ಅಜ್ಜಿ ( ನಾನ ಕರಿತೇನಿ ನೊಡಲಾ ನನಗ ಸರ್ ಅಂತಾಳಾ :-()
ಗುಣಗಳು: ಭಾಳ ಸೂಕ್ಷ್ಮ ಮನಸ್ಸಿನ ಹುಡಗಿ, ಮನಸ್ಸಿನಿಂದ ಭಾಳ ಅಂದ್ರ ಭಾಳ ಗಟ್ಟಿ ಎಲ್ಲಾ ನೊವನ್ನು ತನ್ನಲ್ಲಿನ ಮುಚಕೊಂಡ ಇಟಕೊಳ್ಳತಾಳ, ಭಾರಿ ಡೆಡಿಕೆಟೆಡ ಹುಡುಗಿ.
ವಿಶೇಷತೆಗಳು: ಹೋಟೆಲಗಿ ಹೊದಾಗ ಮದಲ ತನ್ನ ಪ್ಲೆಟ ಸ್ವಚ್ಚ ಐತಿ ಇಲ್ಲಾ ಅಂತ ನೋಡತಾಳಾ ( ಆದ್ರ ಏನ ಮಾಡತೇರಿ ಇಕಿನ ಪ್ಲೆಟನ್ಯಾಗನ ನೊಣ ಇಲ್ಲಾ ಹುಳಾ ಸಿಗತಾವ ಮದಲ ಹಿ ಹಿ), ಬಿಸ್ಲೆರಿ ನೀರ ಬೇಕ ಕುಡ್ಯಾಕ ಹೊರಗ ಹೊದ್ರ, ಪೊಟೊ ತೆಗ್ಯಾತೆವಿ ಅಂದ್ರ ಎನಿಲ್ಲಾದ ಖುಶಿ... ಪುಲ್ಲ ತಯಾರ ಆಗಿ ಬರತಾಳ ಮತ್ತ ನಮ್ಮಂತಾವ್ರ ಬಾಜೂಕ ಬಂದ ನಿಂತ ಅಸಯ್ಯ ಮಾಡತಾಳ ಯಾಕ ಅಂದ್ರ ನಾವ ಎಲ್ಲಾ ಎಸಿಯನ ಪೇಂಟ ಕಲರದಾವ್ರಲಾ ಸೊ ಪೊಟೊ ಎದ್ದ ಕಾನಸತೆತಿ ಅಂತ..ಜಸ್ಟ ಕೀಡಿಂಗ, ಮಸ್ತ ಪೈಕಿ ಇಂಗ್ಲಿಷ ನ್ಯಾಗ ಕವಿತೆಯನ್ನ ಬರಿತಾಳಾ, ನಮ್ಮ ತಂಡನ್ಯಾಗ ಬಂದ ಮ್ಯಾಲ ಸ್ವಲ್ಪ ನಾಟಕನೂ ಮಾಡಾಕ ಕಳತಾಳಾ (ಒಂದ ಸಲಾ ಮಾಡಿಳ್ಳಾ ಎಪ್ಪಾ ಅ ಅ ಒಸ್ಕರ ಅವಾರ್ಡ ಕೊಟ್ಟ ಬಿಟ್ಟು ಇಕಿಗಿ.....)
ನಕಾರಾತ್ಮಕಗಳು: ಸ್ವಲ್ಪ ಹುಡುಗಿ ಮುಂಗೊಪಿ...ಆದ್ರ ಇಗ ಇಗ ಸುಧಾರಸಾತಾಳಾ.
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಎನೋ, ಸರ (ನನಗ ಅಂತಾಳ), I am impressed, Everything happens for a reason.
ಜನ್ಮ ದಿನಾಂಕ: ಎಪ್ರಿಲ ೩೦
ನಾನ ಇಕಿನ ಪರಿಚಯ ಆಗಿದ್ದ ಹೇಂಗ : ನಮ್ಮ ಜಿ. ಐ . ಟಿ ಕೊಲ್ಲೆಜಮೆಟ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಬ್ಯುಟಿ ವಿತ್ತ ಬ್ರೇಣ...

೬)
ಹೆಸರು: ಹೊಳೆಪ್ಪಾ ಜಿ ಕಾಳೆ (ರಮೇಶ)
ವ್ರುತ್ತಿ: ಸೊಪ್ಟವೇರ ಇಂಜಿನೀರ
ಉಪಾದಿಗೋಳ: ಕಾಕಾ, ಹಾಂ ರಮೇಶ, ಕಾಳಿಬರ, ಕಾಳೆರೊಲಾ,ಬಸವನ ಕುಡಚಿ ಗ್ಯಾಂಗ Member.
ಗುಣಗಳು: ಭಾರಿ ಶಿಸ್ತಿನ ಮನಷ್ಯಾ, ಡೆಡಿಕೆಟೆಡ, ಸದಾ ಎಲ್ಲಾರಿಗೂ ಸಹಾಯ ಮಾಡುವ ದೊಸ್ತ
ವಿಶೇಷತೆಗಳು: ಎಲ್ಲಾ ಟೈಮ ಟು ಟೈಮ ಆಗಬೇಕ (ಕಾಕಾ ಶಕ್ಕರ ಡಾಲನೆಕಾ ಟೈಮ ಹೊ ಗಯಾ?) , ಊಟಾ ಆದ ಮ್ಯಾಲ ಒಂದ ಬಾಳೆಹಣ್ಣ ತಿನ್ನತಾನ, ಇಗ ಇಗ ಶೇಂಗಾ ಮಾಡಾಕ ಸೂರೂ ಮಾಡ್ಯಾನಾ.
ನಕಾರಾತ್ಮಕಗಳು: ಭಾಳ ಮಂಡ ಅಂದ್ರ ಮಂಡ, ನನಗ ಅನಸತೆತಿ ಸ್ವಲ್ಪ ಇನ್ನೂ ಫ಼್ಲೇಕ್ಸಿಬಲ ಆಗಬೇಕಂತ.
ಗಾರ್ಹಸ್ಥ್ಯ: ಏಕಜೀವಿ (ಆದ್ರ ಇದರಿಂದ ಜಲ್ದಿ ಹೊರಗ ಬರಬೆಕಂತ ಪ್ರಯತ್ನ ಮಾಡಾತಾನಾ)
ವಿಶೇಷ ಮಾತು: ನಿಮ್ಮ ಅಜ್ಜಿ, ಲೌಡಸ್ಪಿಕರ (ನನಗ ಅಂತಾನ)
ಜನ್ಮ ದಿನಾಂಕ: ಫೆಬ್ರುವರಿ ೧೯
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ನಮ್ಮ ಜಿ. ಐ. ಟಿ ಕೊಲ್ಲೆಜನ್ಯಾಗ ಮದಲನೆಯ ಸೆಮೆಸ್ಟರ ನ್ಯಾಗಿಂದ ಕ್ಲಾಸಮೆಟ ಒಂದ ಕ್ಲಾಸ, ಒಂದ ಬೆಂಚ...ಮತ್ತ ಮುಂದ ಭಾಳ ವಿಚಾರ ಮಾಡಬ್ಯಾಡ್ರಿ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಭಾಳ ಶಾನ್ಯಾ ಹುಡುಗ ಅಂತ...

೭)
ಹೆಸರು: ಸಚಿನ ಅಮ್ಮನ್ನವರ
ವ್ರುತ್ತಿ: ಸೊಪ್ಟವೇರ ಇಂಜಿನೀರ
ಉಪಾದಿಗೋಳ: ಬಾಲಕ, ಬಾಲಕ_ನರೆಂದ್ರ, ಟೆನಶನ ಮ್ಯಾನ, ಚೋಟಾ ಯೋಧಾ (ಇಲ್ಲಿ ಜರ್ಮನಿ ನ್ಯಾಗ ಹೆಸರ ಇಟ್ಟಿದ್ದಾ).
ಗುಣಗಳು: ಭಾರಿ ಡೆಡಿಕೆಟೆಡ ಮನಶ್ಯಾ, ಪರಿಶ್ರಮಿ, ಒಳ್ಳೆಯ ಹ್ಯುಮರ ಸೆಂಸ.
ವಿಶೇಷತೆಗಳು: ಜೀವನ ನ್ಯಾಗ ಭಾಳ ಟೆನಶನ ತೋಗೊತಾನಾ, ಪೊಲಿಟಿಕ್ಸ ಮತ್ತ ಕ್ರಿಕೇಟ ಅಂದ್ರ ಪುಲ್ಲ ರಡಿಯಾಗಿ ನಿಂದರತಾನಾ ಮಾತಾಡಾಕ, ಇಗ ಇಗ ಶೇರ ಮಾರ್ಕೆಟ ನ್ಯಾಗ ತೆಲಿ ಹಾಕಾತಾನ.
ನಕಾರಾತ್ಮಕಗಳು: ಟೆನಶನ ತೋಗೊದ, ಒಮ್ಮೆ ಮಕದ ಮ್ಯಾಲ ಎನ ಮನಸನ್ಯಾಗ ಐತಿ ಅದನ್ನ ಅಂದ ಬಿಡೂದ, ಮತ್ತ ಹುಡಗ್ಯಾರ ಅಂದ್ರ ಮಾತಾಡಾಕ ಹಿಂಜೆರಿಯೂದು.
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಯಾನ, ನಮ್ಮ ಊರಾಗ ಜೀ ಟಿ.ವಿ ಬಿಡತಾರ.
ಜನ್ಮ ದಿನಾಂಕ: ಸೆಪ್ಟಂಬರ ೧೭
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ನಮ್ಮ ಜಿ. ಐ. ಟಿ ಕೊಲ್ಲೆಜನ್ಯಾಗ ೩ ಸೆಮೆಸ್ಟರ ತಿಂದ್ರ ಕ್ಲಾಸಮೇಟ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಇವಾ ನಮ್ಮ ಜೋಡ್ಯಾವ....?

೮)
ಹೆಸರು:
ಆಶಾ ಕಮತಗಿ
ವ್ರುತ್ತಿ: ಸೊಪ್ಟವೇರ ಇಂಜಿನೀರ
ಉಪಾದಿಗೋಳ: ಆಶಾ_ಆಲಸಿ, ಆಶು, ಆಶಿ_ಗುಶಿ.
ಗುಣಗಳು: ಭಾಳ ಜಲ್ದಿ ಯಾರನ್ನ ಸಮೀಪ ತೊಗಾಂಗಿಲ್ಲಾ (ನನ್ನ ಹೆಂಗ ತೊಗೊಂಡಳ್ಳೊ ಕೆಳಬೆಕಾಗೇತಿ), ಹುಡುಗಿ ಒಂದ ಸ್ವಲ್ಪ ಸೆಂಸಿಟಿವ, ಬೆಂಕಿ ಹತ್ತಿದಾಗ ಬಾವಿ ತೋಡಾಕ ಹೋಗತಾಳ.
ವಿಶೇಷತೆಗಳು: ಭಾಳ ಆಲಸಿ (ಊಟಾ ಮಾಡಿ ಹಂಗ ಕುಂಡರತಾಳ ಯಾರರ ಬಂದ ಕೈ ಮತ್ತ ತಾಟ ತೋಳದ ಹೊಗಲಿ ಅಂತ...), ಜಂಗ ಪಂಗ ತಯಾರ ಆಗತಾಳ ಎಲ್ಯಾರ ಹೋಗಬೇಕಂದ್ರ, ಟುಬ ಲೈಟ - ಯಾವಗಲು ತನ್ನ ಲೋಕನ್ಯಾಗನ ಇರತಾಳ ಒಮ್ಮೆ ಎಚ್ಚರ ಆದಾಕಿನ ಎನ ಆತ ಎನ ಆತ ಅಂತ ಕೇಳತಾಳ, ಕನ್ನಡ ಹಾಡಿನ ಮಹಾನ ಅಭಿಮಾನಿ ಮಸ್ತ್ ಹಾಡತಾಳ ಕನ್ನಡ ಹಾಡಗೋಳನ್ನ.
ನಕಾರಾತ್ಮಕಗಳು: ಆಲಸಿತನಾ, ಬೆಂಕಿ ಹತ್ತಿದಾಗ ಬಾವಿ ತೋಡು ಚಟಾ.
ಗಾರ್ಹಸ್ಥ್ಯ: ಏಕಜೀವಿ.
ವಿಶೇಷ ಮಾತು: ರಾಕ್ಶಸ, ಎನೋ ಎನೋ, ಗಿರ್‍ಯಾ ಗುರ್‍ಯಾ (ನನಗ ಅಂತಾಳ)
ಜನ್ಮ ದಿನಾಂಕ: ಡಿಸೆಂಬರ ೧೭
ನಾನ ಇಕಿನ ಪರಿಚಯ ಆಗಿದ್ದ : ನಮ್ಮ ಶಶ್ಯಾನ ತಂಗಿ ಕಾಂಚನನ ಕೊಲೆಜಮೆಟ್ಸ, ಇವರ ಬೆಂಗಳೊರಗಿ ಪ್ರೊಜೆಕ್ಟ ಮಾಡಾಕ ಬಂದಿರ್ರ ಅವಾಗಿಂದ ಪರಿಚಯ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಮದಲನೇ ಸಲಾ ನಾನ ನೋಡಿ ಭಾಳ ಹೈರಾನ ಆಗಿನ್ನಿ ಯಾಕ ಅಂದ್ರ ಅವಾಗ ಇಕಿಗಿ ಪಲ್ಲಿ(ಪಲ್ಲವಿ) ತನ್ನ ಕೈಯಾರೆ ತೂತ್ತ ಮಾಡಿ ಉನ್ನಸಾತಿಳ್ಳ ಭಾಳ ಹ್ರುದಯಕ್ಕ ಟಚಿಂಗ ಆಗು ಅಂತ ಸಿನ ಇತ್ತ ಅದ,ಮನಸ ಕರಿಗಿ ಹೊಗಿತ್ತ ಇವರದ ಸ್ನೇಹವನ್ನು ನೋಡಿ..

೯)
ಹೆಸರು:
ಸಾತಲಿಂಗಯ್ಯ ಹಿರೇಮಠ
ವ್ರುತ್ತಿ: ಮೇಕ್ಯಾನಿಕಲ ಇಂಜಿನೀರ
ಉಪಾದಿಗೋಳ: ಅಜಯ_ನೊನಸೆಂಸ, ಪಾವ ಕೀಲೊ, ಸೊಳಪಾಟ್ಯಾ, ಮಿಥುನದಾ, ಸಾಮಗೋಳ
ಗುಣಗಳು: ಭಾಳ ಜಲ್ದಿ ಹೊಂದಕೊತಾನ, ಭೇದ ಭಾವ ವಟ್ಟ ಮಾಡಾಂಗಿಲ್ಲಾ, ದೊಸ್ತರಿಗಿ ಭಾಳ ಸಹಾಯ ಮಾಡತಾನಾ.
ವಿಶೇಷತೆಗಳು: ಭಾಳ ಅಂದ್ರ ಭಾಳ ಶಾನ್ಯಾ ತಮ್ಮ ಮೇಕ್ಯಾನಿಕಲ ಡಿಪಾರ್ಟಮೆಂಟ ಟೊಪ್ಪರ (ನವೋದಯ ಪ್ರೊಡಟ್ಕ), ಭಾಳ ತೆಲಿ ಒಡಸಾಕ ಹೊಗತಾನ.
ನಕಾರಾತ್ಮಕಗಳು: ಭಾಳ ತೆಲಿ ಒಡಸಾಕ ಹೊಗತಾನ ಆದ್ರ ಅದರ ತಕ್ಕ ನಡಕೊಳ್ಳಾಂಗಿಲ್ಲಾ, ಸಮಯದ ಮಹತ್ವ ವಟ್ಟ ಇಲ್ಲಾ ಬರತೆನಿ ಅಂತ ಹೇಳತಾನ ಆದ್ರ ಪಾರ್ಟಿ ಪತ್ತೆನ ಇರಾಂಗಿಲ್ಲಾ.
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಅವನ *॒॑!, ಹುಚ್ಚ %‍ಽ* ‍ಽಽ*,
ಜನ್ಮ ದಿನಾಂಕ: ಮೇ ೭.
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ನಮ್ಮ ಜಿ. ಐ. ಟಿ ಜುನಿಯರ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಭಾಳ ಅಂದ್ರ ಭಾಳ ಶಾನ್ಯಾ ಅಂತ.

೧೦)
ಹೆಸರು:
ಮಮತಾ ಗಜಾರೆ
ವ್ರುತ್ತಿ: ಸೊಪ್ಟವೇರ ಇಂಜಿನೀರ
ಉಪಾದಿಗೋಳ: ಮಮತಾ_ಖೋ,ಮಮತಾ_ಗೊತ್ತಿಲ್ಲಾ, ಹರಕ್ಯುಲಿಸನ ತಂಗಿ ಮರಕ್ಯುಲಿಸ, ಕುಸುಮಿ (ನಾನ ಕರಿಯುದ)
ಗುಣಗಳು: ಭಾಳ ಇಮೊಶನಲ, ಭಾಳ ಕೆರಿಂಗ, ಹೆಲ್ಪಿಂಗ, ಸ್ವಲ್ಪ ಸಿಟ್ಟ ಬರತೇತಿ ಆದ್ರ ಜಲ್ದಿ ಹೊಗತೇತಿ, ಮನಸ್ಸ ಬಿಳಿ ಹಾಳಿ....
ವಿಶೇಷತೆಗಳು: ಬ್ಯುಟಿ ವಿತ್ತ ಬ್ರೆಣ, ಇಕಿಂದ ಸ್ಮೈಲ, ಅಡಗಿ ಮಸ್ತ ಮಾಡತಾಳ (ಸ್ಪೆಶಲಿ ಚಪಾತಿ, ದಮ ಬಿರ್ಯಾನಿ, ಚಿಕನ ಕರ್ರಿ...ಇವಾ ಅಶ್ಟ ಯಾಕ ಹೆಳಾತೇನಿ ಅಂದ್ರ ನನ್ನು ಫೆವರೆಟಲಾ :-)), ಪ್ರಯತ್ನವಾದಿ, ಭಾಳ ಜಲ್ದಿ ಎನ ಹಚ್ಚಿಕೊಳ್ಳಾಂಗಿಲ್ಲಾ ಆದ್ರ ಒಂದ ಸಲಾ ಹಚ್ಚಕೊಂಡಳ ಅಂದ್ರ ಅದನ್ನ ಸರಿಯಾಗಿ ನಿಭಾಯಿಸತಾಳ, ಭಾಳಾ ಎಕ್ಟಿವ ಹುಡುಗಿ (ಅದ ಎಲ್ಲಿಂದ್ರ ಅಶ್ಟ ಸ್ಪೂರ್ತಿ ತಗೊಂಡ ಬರತಾಳಾ ನಾಕಾನೆ ಎಂಟಾನೆ...(ಲೇ ಮತ್ತ ಶೆಂಗಾ ವಗದಿ ಎಂದಾ ಸುಧಾರಸಾಂವಲೆ ನೀ ಶೆಂಗಾಮ್ಯಾನ), ಒಂದ ಒಂದ ಸಲಾ ಅನಸತೇತಿ ಸ್ವಲ್ಪ ಜಾಸ್ತಿ ಮಾತಾಡತಾಳಾ ಅಂತ ಇದ ಯಾವಾಗ ಅನಸತೆತಿ ಅಂದ್ರ ಯಾವಾಗ ನನಗ ಕೇಳು ಮನಸ ಇರಂಗಿಲ್ಲಾ ಆದ್ರ ಇಕಿ ಹಂಗ ಮಾತಾಡತಿರತಾಳಾ....ಹಿ ಹಿ, ಇನ್ನು ಸನ್ನ ಹುಡುಗಿವ ಗುಣಗೋಳ ಅದಾವ ಪಕ್ಕಾ ಸನ್ನಾ ಹುಡಗ್ಯಾರ ಅತ್ತಂಗ ಅಳತಾಳ....ಎನ ಹುಡಗಿನೋ.
ನಕಾರಾತ್ಮಕಗಳು: ಇಗ ಸದ್ದೆಕ್ಕ ಎನಿಲ್ಲಾ ಆದ್ರ ಮದಲ ಇದ್ದು....
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಅರ್ರೆ, ಮಂಗ್ಯಾ,ನಿಂಗ ಗೊತ್ತು, (ಗಿರ್ರ್ಯಾ ಗುರ್ರ್ಯಾ, ಶಾನೂ, ದೊಡ್ದ ಮಂಗ್ಯಾ, ಶೇಂಗಾ ಮಂಗ್ಯಾ - ನನಗ ಅಂತಾಳಾ)
ಜನ್ಮ ದಿನಾಂಕ: ಡಿಸೆಂಬರ ೪
ನಾನ ಇಕಿನ ಪರಿಚಯ ಆಗಿದ್ದ ಹೇಂಗ: ನಮ್ಮ ಶಶ್ಯಾನದಿಂತ ಪರಿಚಯ
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಎನ ಹುಡುಗಿ ಇಕಿ ಎನ ಚೆಂದಂಗೆ ಮಾತಾಡಾಂಗಿಲ್ಲಾ ಎನಿಲ್ಲಾ....ಸ್ವಲ್ಪ ರಿಸರ್ವಡ ಅದಾಳಾ ಅಂತ.

೧೧)
ಹೆಸರು:
ಕಾಂಚನ
ವ್ರುತ್ತಿ: ಸೊಪ್ಟವೇರ ಇಂಜಿನೀರ
ಉಪಾದಿಗೋಳ: ಕೋಳಿ.
ಗುಣಗಳು: ಭಾರಿ ಸೆಂಸಿಟಿವ ಹುಡುಗಿ, ಕನ್ನಡ ಮಾತಿನಲ್ಲಿ ಪಾರಿನ್ಯತೆ ಹೋಂದಿರಾಕಿ.
ವಿಶೇಷತೆಗಳು: ಜಗತ್ತನ್ನ ತನ್ನ ತೆಲಿ ಮ್ಯಾಲ ಹೊತ್ತಕೊಂಡ ಹೊಡ್ಯಾಡತಾಳ, ಎಲ್ಲಾರೂ ಬಗ್ಗೆ ಭಾಳ ಕಾಳಿಜಿ ಮಾಡತಾಳ, ವಟ್ಟ ಒಂದ ಸನ್ನಿವೇಶ ನ್ಯಾಗ ಇರಾಂಗಿಲ್ಲಾ ಒಮ್ಮೆ ಎದ್ದಾಕಿನ ಸನ್ನಿವೇಶನ ಬದಲ ಮಾಡತಾಳ....ಟೊಪಿಕ ಚೆಂಜರ, ಇಕ್ಕಿನ ಬೈಕ ಸ್ಟಾಟ ಮಾಡುವಾಗ ಬರೂ ಧ್ವನಿ ಹಂತಾ ನಗಿ.....
ನಕಾರಾತ್ಮಕಗಳು: ಜಗತ್ತನ್ನ ತನ್ನ ತೆಲಿ ಮ್ಯಾಲ ಹೊತ್ತಕೊಂಡ ಹೊಡ್ಯಾಡೂದ
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಹೌದಾ, ಎನೋ ವಟ್ಟ ಟೊಪಿಕ ಚೆಂಜ ಆಗಿರಬೇಕ...
ಜನ್ಮ ದಿನಾಂಕ: ನವಂಬರ ೭
ನಾನ ಇಕಿನ ಪರಿಚಯ ಆಗಿದ್ದ ಹೇಂಗ: ನಮ್ಮ ಶಶ್ಯಾನ ತಂಗಿ, ಇವಳ ಬೆಂಗಳೊರಗಿ ಪ್ರೊಜೆಕ್ಟ ಮಾಡಕಾ ಬಂದಿರ್ರ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಎನಪ್ಪಾ ಕಾಲಾಗ ಎನಾರ ಗಾಲಿ ಗಿಲಿ ಅದಾವ ಎನಾ?

೧೨)
ಹೆಸರು:
ಕಿರಣ
ವ್ರುತ್ತಿ: ಎಮ. ಬಿ. ಎ (ಮಾರ್ಕೆಟಿಂಗ)
ಉಪಾದಿಗೋಳ: ಯೋ ಮ್ಯಾನ.
ಗುಣಗಳು: ಸೂಟ ಮಾತಗೋಳ - ಮನಸ್ಸಿನ್ಯಾಗ ಎನ ಬರತೇತಿ ಮಕದ ಮ್ಯಾಲ ಅಂದ ಬಿಡತಾನಾ,
ವಿಶೇಷತೆಗಳು: ಮುರ್ತಿಗಿಂತ ಕಿರ್ತಿ ದೊಡ್ಡದ ಅಂತಾರಲ್ಲಾ ಅದಕ್ಕ ತಕ್ಕ ಊದಾಹರಣೆ - ವಯಸ್ಸಿಗಿಂತಾ ಜಾಸ್ತಿ ಬುದ್ದಿ, ಹ್ಯುಮರ ಸೆಂಸ ಅಂತಿ ಭಾಳ ಐತಿ, ಕ್ರಿಯೆಟಿವ ತೆಲಿ ಮಾರ್ಕೆಟಿಂಗ ಜೋಬಗಿ ಪರ್ಫೆಕ್ಟ ಸೂಟ.
ನಕಾರಾತ್ಮಕಗಳು: ಒಂದ ಒಂದ ಸಲಾ ಸೂಟ ಮಾತಗೋಳ ಸರಿ ಅನಸಾಂಗಿಲ್ಲಾ.
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಸಿರಿಯಸ ಮಕ್ಶರಿ, ಲೇ ಹೊಗೊಲೆ.
ಜನ್ಮ ದಿನಾಂಕ: ಅಕ್ಟೊಬರ ೬
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ನಮ್ಮ ಶಶ್ಯಾನ ಕಜಿನ ಬ್ರದರ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಎನಪಾ ಯೋ ಮ್ಯಾನ.

೧೩)
ಹೆಸರು: ಬಬಿತಾ ಗಜಾರೆ
ವ್ರುತ್ತಿ: ಡಿಪ್ಲೊಮಾ ಇಂಜಿನೀರ
ಉಪಾದಿಗೋಳ: ಬಬ್ಲಿ_ಗುಬ್ಲಿ, ಬಬ್ಬಿ.
ಗುಣಗಳು: ಶಾಂತ, ಸಮಾಧಾನ.
ವಿಶೇಷತೆಗಳು: ಇಕಿ ಗುಣಾ ತಕ್ಕಾಗಿ ಇಕಿಂದ ಅವಾಜನೂ, ಇಶ್ಟ ಜೊರ ಮಾತಾಡತಾಳ ಅಂದ್ರ ೧ ಸೆಂಟಿಮೀಟರ ದೂರ ಅಂದ್ರ ದೂರ ಕುಂತಾಂವಗಿ ಭಾಳ ಸವಾಕಾಶ್ಯ ಕೇಳತೆತಿ...ಹಿ ಹಿ.
ನಕಾರಾತ್ಮಕಗಳು: ಮುಂದ ಬರೂದ ಛಲಾನ ಇಲ್ಲಾ (ನನಗ ಅನಸತೇತಿ ಆದ್ರ ನಾನು ತಪ್ಪನು ಇರಬಹುದು...)
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಬರೆ ಹೂಂ ಹೂಂ ಅಂತಾಳಾ, ನೀ ಎಲ್ಲಿ ಅದಿ ಅಂತ ಪೊನ ನ್ಯಾಗ ಕೇಳಿರ ಬಸನ್ಯಾಗ ಅಂತ ಹೇಳತಾಳ..ಶಾನಿ.
ಜನ್ಮ ದಿನಾಂಕ: ಮೇ ೧೬
ನಾನ ಇಕಿನ ಪರಿಚಯ ಆಗಿದ್ದ ಹೇಂಗ: ಮಮತಾನ ತಂಗಿ
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಸೈಲೆಂಟ...............

೧೪)
ಹೆಸರು: ಅಮೋಲ ಮುನಾಸೆ
ವ್ರುತ್ತಿ: ಸೊಪ್ಟವೇರ ಇಂಜಿನೀರ
ಉಪಾದಿಗೋಳ: ಸಿನಿಯರ ಫಕ್ರುದಿನ್ನ, ಅಮೋಲಯಾ.
ಗುಣಗಳು: ಜಲ್ದಿ ದೊಸ್ತಿ ಬೆಳಿಸಿಕೊತಾನಾ...
ವಿಶೇಷತೆಗಳು: ಪಕ್ಕಾ ಶೇಂಗಾ, ಮಸ್ತ ಎಲ್ಲಾರ್ನೂ ನಗಿಸಿಕೊಂತ ಇರತಾನಾ.
ನಕಾರಾತ್ಮಕಗಳು: ಎಲ್ಲಾ ಸನ್ನಿವೆಶನ್ಯಾಗ ಮಜಾಕ ಉಡಾಸೂದ ಸರಿಯಲ್ಲಾ.
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಔರ್ ಕ್ಯಾ ಮಾಮು.
ಜನ್ಮ ದಿನಾಂಕ: ಜನೇವರಿ ೧೭
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ಪಲ್ಲಿ, ಕಾಂಚನ, ಆಶಾನ ಕೊಲ್ಲೆಜಮೇಟ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ನಂದ ಇವಂದ ಜೋಡಿ ಮಸ್ತ ಐತಿಲಾ.


೧೫)
ಹೆಸರು: ರಾಜು ಮಿರಜೆ
ವ್ರುತ್ತಿ: ಸಿಸ್ಟೆಮ ಅಡ್ಮಿನ.
ಉಪಾದಿಗೋಳ: ಮಾಮು, ಸಿರಿಯಸ, ದಬ್ಬ, ವಡಗಾವಿ ಗ್ಯಾಂಗ member.
ಗುಣಗಳು: ಭಾಳ ಪ್ರಯತ್ನವಾದಿ, ಡೆಡಿಕೇಟೆಡ ಮನಶ್ಯಾ.
ವಿಶೇಷತೆಗಳು: ಮುಂದ ಬರೂ ಛಲಾ ಐತಿ, ಬೆರೆ ಬೆರೆ ವಿಷಯಗಳನ್ನೂ ಕಲಿಬೆಕನ್ನು ಇಚ್ಚೆ ಐತಿ.
ನಕಾರಾತ್ಮಕಗಳು: ಎನು ಇಲ್ಲಾ...
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಔರ್ ಮಾಮು ಕ್ಯಾ ಕರ ರಹಾ ಹೈ, ಎಲ್ಲಾ ನಿಮ್ಮ ಆಶಿರ್ವಾದಪಾ.
ಜನ್ಮ ದಿನಾಂಕ:
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ರವ್ಯಾನ ಖಾಸಮ ಖಾಸ ದೊಸ್ತ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಡುಮ್ಮ ಡುಮ್ಮ....

೧೬)
ಹೆಸರು: ಸಂತೋಷ ದಿನ್ನಿಮನಿ
ವ್ರುತ್ತಿ: ಮೆಕ್ಯಾನಿಕಲ ಇಂಜಿನೀರ
ಉಪಾದಿಗೋಳ: ಸ್ಯಾನ.., ಸಂತು, ವಡಗಾವಿ ಗ್ಯಾಂಗ member.
ಗುಣಗಳು: ಭಾಳ ವಳ್ಳೆಯ ಮನಶ್ಯಾ, ಹೆಲ್ಪಿಂಗ, ಕೇರಿಂಗ....
ವಿಶೇಷತೆಗಳು: ಪೇಂಟಿಂಗ ಮಸ್ತ ಮಾಡತಾನಾ, ಕ್ರಿಯೆಟಿವ ತೆಲಿ ಐತಿ, ನಗಿಸಿಕೊಂತ ಇರತಾನ ಎಲ್ಲಾರನೂ.
ನಕಾರಾತ್ಮಕಗಳು: ಎನು ಇಲ್ಲಾ
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಯೂರ ಪೆನ..........., ಗಾಯ.......ಹಿ ಹಿ ನನಗ ನಗಿ ಬರಾತೇತಿ ಬರ್ಯಾಕ ಆಗವಾತ್ತ.
ಜನ್ಮ ದಿನಾಂಕ: ಜುಲೈ ೧೬
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ನಮ್ಮ ಮನಿ ಬಾಜೂಕನ ಇರತಿದ್ದ..ನಾನ ೯ ನ್ಯಾಗ ಇದ್ದಾಗ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಎನಪಾ ಭಾಳ ಶಾನ್ಯಾ ಇರಬೆಕಲಾ ಇವಾಂ.

೧೭)
ಹೆಸರು: ಉದಯ
ವ್ರುತ್ತಿ: ಇನ್ನ ಒದಾತಾನ (ಬಿ. ಇ)
ಉಪಾದಿಗೋಳ: ಉದ್ಯಾ
ಗುಣಗಳು: ಎನ ಹೇಳಲಿ ಇವನ ಬಗ್ಗೆ.....ಸುಳ್ಳ ಹೇಳಾಕ ಆಗವಾತ್ತ...ಹಿ ಹಿ
ವಿಶೇಷತೆಗಳು: ಎಪ್ಪಾ ಇಷ್ಟ ನಗಸಾವ್ರನ್ನ ನಾನ ನೋಡಿರಾಕಿಲ್ಲಾಪಾ....ಒಂದೊಂದ ಮಾತಿಗಿನೂ ನಗಸತಾನಾ, ಹ್ಯುಮರ ಸೆಂಸ ಅಂತಿ ಥುಂಬಿ ಥುಂಬಿ ತುಳಕ್ಯಾಡಾತೈತಿ.
ನಕಾರಾತ್ಮಕಗಳು: ಎನಿಲ್ಲಾ
ಗಾರ್ಹಸ್ಥ್ಯ: ಏಕಜೀವಿ.
ವಿಶೇಷ ಮಾತು: ಇವನ ಎಲ್ಲಾ ಮಾತಗೊಳ ವಿಶೇಷನಾ....
ಜನ್ಮ ದಿನಾಂಕ: ಗೊತ್ತ ಆದ ತಕ್ಶನಾನ ಹಾಕತೇನಿ
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ಕಿರಣ ಯೋ ಮ್ಯಾನನ ತಮ್ಮಾ
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಎಪ್ಪಾ ನನ್ನ ಕಟ್ಟರ ಕೊಂಪಿಟಿಟರ ಬಂದ ಅಂತ...

೧೮)
ಹೆಸರು: ರವಿ ಪಾಮೋಜಿ
ವ್ರುತ್ತಿ: ಎಮ. ಬಿ. ಎ (ಕೆಲಸಾ ಹುಡಕ್ಯಾಡಾತಾನ)
ಉಪಾದಿಗೋಳ: ಪಾಮ_ಆಯಿಲ.
ಗುಣಗಳು: ಜಾಸ್ತಿ ಗೋತ್ತಿಲ್ಲಾ ಎನ ಗೋತ್ತ ಐತಿ ಅಂದ್ರ...ಭಾಳ ಸೆಂಸಿಟಿವ ಮನಶ್ಯಾ.
ವಿಶೇಷತೆಗಳು: ಪಕ್ಕಾ ಶೇಂಗಾ....ನನ್ನ ಸದೆಕ ಬಿಡಾಂಗಿಲ್ಲಾ ಇಂವಾ... ಕಾಡತಾನ....ಹಿ ಹಿ
ನಕಾರಾತ್ಮಕಗಳು: ಎನು ಇಲ್ಲಾ
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು: ಅನ್ನಾ...
ಜನ್ಮ ದಿನಾಂಕ: ಸಪ್ಟೆಂಬರ ೨೪
ನಾನ ಇವನ್ನ ಪರಿಚಯ ಆಗಿದ್ದ ಹೇಂಗ: ಗಂಗನ್ನ ರೂಮಿಗಿ ಜೋಬ ಹುಡಕ್ಯಾಡಾಕ ಬಂದಿದ್ದಾ.
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ನಮ್ಮಿಬ್ಬರದು ಕಲರ ಒಂದ ಐತಿಲಾ ಎನ ಅನ್ನಾ ತಮ್ಮಾ ಎನಪಾ ಇಬ್ಬರು ನಾವ......?

೧೯)
ಹೆಸರು:
ಸಂತೋಷ ಪಾಟೀಲ
ವ್ರುತ್ತಿ: ಎಮ. ಸಿ. ಎ (ಇನ್ನ ಕೆಲಸಾ ಹುಡಕ್ಯಾಡಾತಾನ)
ಉಪಾದಿಗೋಳ: ಸಂತ್ಯಾ_ಗುಂತ್ಯಾ.
ಗುಣಗಳು: ಭಾರಿ ಸೈಲೆಂಟ ಮನಶ್ಯಾ.
ವಿಶೇಷತೆಗಳು: ಇವನೂ ಬಿಜಾಪುರ ಸ್ಟೈಲ ಮಾತಗೋಳ.
ನಕಾರಾತ್ಮಕಗಳು: ನನಗ ಗೂತ್ತ ಇದ್ದಿದ್ದೂ ಎನೂ ಇಲ್ಲಾ.
ಗಾರ್ಹಸ್ಥ್ಯ: ಏಕಜೀವಿ
ವಿಶೇಷ ಮಾತು:
ಜನ್ಮ ದಿನಾಂಕ: ಜನೇವರಿ ೮
ನಾನ ಇವನ ಪರಿಚಯ ಆಗಿದ್ದ ಹೆಂಗ: ಪಲ್ಲಿ, ಕಾಂಚನ, ಆಶಾನ ಎಮ. ಸಿ. ಎ ಕೊಲ್ಲೆಜಮೇಟ
ಮದಲನೇ ಸಲಾ ನೋಡಿದಾಗ ಏನ ಅನಿಸಿತ್ತ: ಎಷ್ಟ ಭಾರಿ ಅದಾನೋ ಇವಾಂ..ಹಿ ಹಿ

Sunday, February 25, 2007

ನಮ್ಮ ಆನೆಕಲ ಪಯಣದ ಸವಿ ನೆನಪುಗಳು

ನಾವು ಟೋಟಲ ೧೨ ಮಂದಿ ೬ ಬೈಕ ಮ್ಯಾಲ ಆನೆಕಲ (ಇದೂ ಸುಮಾರ ಒಂದ ೬೦ ರಿಂದ ೮೦ ಕೀಲೊ ಮೀಟರ ದೂರ ಐತಿ ಬೆಂಗಳೂರು ದಿಂತ್ರ ತಮಿಳನಾಡು ದಿಕ್ಕನ್ಯಾಗ(ಹೊಸುರ ಕಡೆ))....ಮಸ್ತ ೬ ಬೈಕ ೧೨ ಮಂದಿ ಅತರೊಳಗ ೮ ಡವಗಾಗೋಳ ೪ ಡವಗಿಗೋಳ. ಪುಲ್ಲ ೮೦-೧೦೦ ಸ್ಪಿಡ ನ್ಯಾಗ ಬಾಂವ ಬಾಂವ ಅಂತ ಬೆಂಗಳೂರ - ಹೊಸುರ ರೋಡ ಮ್ಯಾಲಾ ಧೂಳಾ ಆರಿಸಿಕೊಂತ, ಗಾಳಿಗಿನಾ ಸವಾಲ ಹಾಕೂತ್ತಾ, ನೀ ಜಾಸ್ತಿ ರೊ ನಾವ ಜೋರನೊ ಅಂತ ಹೇಳಕೊಂತಾ ಗಾಡಿದ ಎಲ್ಲಾ ತರಹದ ಟೆಸ್ಟಿಂಗ ಮಾಡಿ ಬಿಟ್ಟಿದ್ದೂ ಅವತ್ತ. ಇ ಅನುಭವದ ಸಿಹಿ ನೆನಪುಗಳನ್ನು ಇಗ ನಾನು ನಿಮ್ಮ ಮುಂದೆ ಹಂಚಿಕೊಳ್ಳಲು ಬಯಸುತ್ತಿದ್ದೇನಿ.....

ಹೋದಿರಿ..............

ಹೂಂ ಇನ್ನ ಆ ಮಹಾನ ೧೨ ಶೇಂಗಾ ಮಂದಿ ಯಾರ ಯಾರ ಅಂತ ವಿಚಾರ ಮಾಡಾತೇರಿ, ತಡ್ರಿ ಪರಿಚಯ ಮಾಡತೇನಿ,

೧. ಗಿರಿ ನಾನ (ಶೇಂಗಾಮ್ಯಾನ)
೨. ಸಚಿನ (ಬಾಲಕ)
೩. ರಮೇಶ (ಕಾಕಾ)
೪. ಮಮತಾ (ಕುಸುಮಿ)
೫. ಪಲ್ಲವಿ (ಪಲ್ಲಿ)
೬. ಅಜಯ (ನೊನಸೇಂಸ)
೭. ಬಬಿತಾ (ಬಬ್ಲಿ)
೮. ರವಿ (ರೌಡಿ,ಚಿ)
೯. ರಾಜು (ಮಾಮು)
೧೦. ಸತೀಶ
೧೧. ಸಂತೋಷ
೧೨. ಪದ್ಮಶ್ರೀ (ಪದ್ದು)

ಲಾಸ್ಟಗಿ ನಮ್ಮ ಸೆಕ್ಯುರಿಟಿ ಗಾರ್ಡ (ಗೈಡ) -- ಹೋಳ-ಉಪ್ಪಿನಕಾಯಿ..ಹಿ ಹಿ


ಪ್ಲ್ಯಾಶಬ್ಯಾಕ:

ನಮ್ಮ ಸಾಸ್ಕೇನ್ಯಾಗ ಸೆಕ್ಯುರಿಟಿ ಗಾರ್ಡ ಒಬ್ಬ ಇದ್ದ ಅವನ ಕಡೆಂದ ನಾನ, ಬಾಲಕ, ಕಾಕಾ ಮಿಲಿಟರಿ ಅರಿವಿ ತೋಗೊಂಡಿದ್ದು ಮತ್ತ ಅದನ ಪ್ಯಾಂಟ ಹೊಲಸಾಕಂತ ಮಾಪ ಕೊಡಾಕ ಆನೆಕಲ್ಲಿಗಿ ಬರ್ರಿ ಅಂತ ಸೆಕ್ಯುರಿಟಿ ಗಾರ್ಡ ಹೇಳಿದ್ದಾ. ಆವಾಗ ನನ್ನ ಚಿಕ್ಕ ತೆಲ್ಯಾಗ ಇರೂ ಶೇಂಗಾ ಮಿದಿಳು ಒಂದ ದೊಡ್ಡದ ಪ್ಲಾನ ಹಾಕಾಕ ಶೂರೂ ಮಾಡಿತ. ಯಾಕ ನಾವೇಲ್ಲಾರೂ ಕುಡಿ ಒಂದ ದಿನಾ ಟ್ರಿಪಗಿನಾ ಹೋಗಿ ಬರೊನ ಆನೆಕಲಗಿ ಅಂತಾ...ಮತ್ತೇನ ಶೂರೂ ಆತ ನೋಡ ವಿಚಾರಗೊಳನ್ನ ಸತ್ಯಾ ಮಾಡಾಕ, ಸ್ಟಾರ್ಟ ತೇಲಿ ಹೊಡಸಾಕ, ಏಲ್ಲಾರ್ಣು ಕೇಳಾಕಾ, ಕಾಲ ಬಿದ್ದ ಬಿದ್ದ ಹಾಂ ಹಾಂ ಅನ್ನಸಾಕಾ. ಕೊನೆಗೆ ಎಲ್ಲಾರದೂ ಕೈ ಮುರದ ಮುರದ ಸೊರ್ರಿ ಸೊರ್ರಿ ಮುಗದ ಮುಗದ..ಹಾಂ ಅನಿಸಿದೂ...ಆದ್ರನು ಸ್ವಲ್ಪ ಮಂದಿ ಬರಲಿಲ್ಲಾ ಕಡೆಗನು, ಅದ ಬೇರೆ ವಿಷಯ (ಶಶ್ಯಾ, ಗಂಗನ್ನಾ, ಸಂಗ, ಆಷಾ, ಕಂಚನ, ಯೋ ಮ್ಯಾನ,.....ಮಿಸ್ಸಿಂಗ :-()ಅದ್ರನೂ ಮನಸ ಗಟ್ಟಿ ಮಾಡಿ ಮುಂದವರದು. ಸ್ವಲ್ಪ ಮಂದಿ ಜೈ ಜೈ ಅಂದ್ರ, ನಾನೂ ನಾನೂ ಅಂದ್ರ ಸ್ವಲ್ಪ ಜನಾ...ಮತ್ತೆನ ನಡಿ ವಡಿ ಚಕಡಿ ಅಂತ ನಾನೂ ಶೂರೂ ಮಾಡಿದ್ನೀ. ಆದ್ರ ಇನ್ನೊಂದ ದೊಡ್ಡ ತ್ರಾಸ ಕಾದಿತ್ತ...ಗಾಡಿ ಇರಾಕೀಲ್ಲಾ ಅಶ್ಟ ನಮ್ಮ ಕಡೆ. ಎನ ಮಾಡೂದ ಅಂತ ವಿಚಾರ ಮಾಡಾತಿದ್ದೀವಿ..ಯಾಕ ಅಂದ್ರ ಮದಲ ಮದಲ ಇಲ್ಲಾ ಅಂದಾವ್ರ ಇಗ ನಾನೂ ನಾನೂ ಅನ್ನಾತಿರ್ರ ಹಿ ಹಿ ಹೇಳಿ ಕೇಳಿ ಶೇಂಗಾ/ಡವಗಾ ಮಂದಿ..ಮತ್ತ ಎನ ಎಲ್ಲಾರಿಗೂ ಪೋನ ಹಚ್ಚೂದಾ, ನಿಂದ ಗಾಡಿ ಖಾಲಿ ಐತಿ - ನಿಂದ ಗಾಡಿ ಖಾಲಿ ಐತಿ ಅಂತ ಕೇಳುದಾ, ಇದ್ರ ಬರೆ ಗಾಡಿ ಅಶ್ಟ ಕೋಡ ನೀ ಎನ ಬರಾಕ ಹೋಗಬ್ಯಾಡ ಅನ್ನು ಪರಿಶ್ತಿತಿ ಬಂದಿತ್ತ... ಹಿ ಹಿ..

ಆಮೇಲೆ ಭಾಳ ಗುದ್ಯಾಡಿ ಮ್ಯಾಲ ಒಂದ ಯೋ ಮ್ಯಾನ (ಕಿರಣ) ಗಾಡಿ ಎಬ್ಬಿಸಿದೀವಿ, ಎರಡ ಗಾಡಿ ಸಂತೊಷಂದ ಎಬ್ಬಿಸಿದೀವಿ...ಇಗ ನಂದ, ಕಾಕಾ, ಬಾಲಕ, ಮತ್ತ ೩ ಗಾಡಿ ಆಗಿ ಸೇರಿ ೬ ಆದೂ....ಉಸಿರಾಗ ಉಸಿರ ಬಂದಂಗ ಆತ...

ಮತ್ತೇನ ಇನ್ನೆನ ಹಿಂದ ಹೊಳ್ಳಿ ನೊಡಲೀಲ್ಲಾ ನಾವ ಏನ....ರೈ ರೈ..ಹಲ್ಯಾ ಹಲ್ಯಾ ಅಂತ ಶೂರೂ ಆತಾ ನೋಡ ನಮ್ಮ ಆನೆಕಲದ ಪ್ರವಾಸ!!!!!!!!!!

ಪ್ಲಾನ: ಎಲ್ಲಾರೂ ನವರಂಗದಿಂತ ಕೋರಮಂಗಲ ರಿಂಗ ರೋಡ..ಅಲ್ಲಿಂದ ಕರ್ರಿ ಲಿಪ ಹೋಟೆಲ. ಇಲ್ಲಿ ನಾಸ್ಟಾ ಮಾಡೂದಾ. ಇದ ಆದ ಮ್ಯಾಲ ಅಲ್ಲಿಂದ ಹೊಸುರ ರೋಡ... ಹೊಸುರ ಆದ ಮ್ಯಾಲ ಸ್ವಲ್ಪ ಮುಂದ ಹೋಗಿ ರೈಟ ಟರ್ನ ತೋಗೊದು ಇತ್ತ. ಏಲ್ಲಾರಿಗೂ ವಾರ್ನಿಂಗ!!! ಕುಡಿ ಹೋಗೂದಾ ಅಂತ, ಜಾಸ್ತಿ ಮಂಗ್ಯಾನ ಆಟಾ ಮಾಡಾಂಗಿಲ್ಲಾ ಅಂತ.

ಎಲ್ಲಾರಿಗೂ ಮದಲಾ ಹೇಳಿತ್ತಾ: ಮಸ್ತ್ ಪೈಕಿ ಜಿನ್ಸ, ಪುಲ್ಲ ಸ್ಲಿವ ಶರ್‍ಟ (ಹುಡಗೊರಗಿ), ಟೋಪ ಅಥವಾ ಟಿ-ಶರ್‍ಟ (ಹುಡಗ್ಯಾರಿಗಿ), ಬೂಟ ಮಸ್ಟ ಇರಬೇಕಂತ..ಮಸ್ತ ಪೈಕಿ ಬೀಸಲಾ ಇರತೇತಿ, ಜಂಗಲನ್ಯಾಗ ಗಿಡ ಗಂಟಿಗೋಳ ಇರತಾವಾ ಅದರಾಗಿಂದ ಹೊಗೊದ ಐತಿ ಅದಕ್ಕ ಎಲ್ಲಾ ಮೇಲಿನ ವಸ್ತುಗಳು ಬೇಕಾ ಅಂತಾ ಹೇಳಿತ್ತಾ....

ಎಲ್ಲಾರ್ನು ಗೋಳೆ ಮಾಡುದ ಬೆಳಿಗ್ಗೆ ಬೆಳಿಗ್ಗೆ ಅಂದ್ರ ದೊಡ್ದ ತ್ರಾಸದ ಕೆಲಸಾಪಾ...ಓಂದ ಕುರಿ ಬ್ಯಾ ಅಂತ ಅಂದ್ರ ಇನ್ನೊಂದ ಮ್ಯಾ ಅಂದ ಬಿಟ್ಟಿರತೇತಿ, ಒಬ್ಬ ಇನ್ನ ಹಾಸಿಗ್ಯಾಂಗಿತ್ರ ಎದ್ದಿರಾಂಗಿಲ್ಲಾ, ಇನೋಬ್ಬ ಇನ್ನ ಟೊಯಲೇಟ ನ್ಯಾಗ ಹೋಗಿ ಕುಂತಿರತಾನಾ, ಒಬ್ಬಾಕೀ ಇನ್ನ ಮೇಕಪ ಮಾಡಾಕಾ ಶೂರೂ ಮಾಡಿರತಾಳಾ, ಇನ್ನೋಬ್ಬಾಕಿ ಆತೋ ಇನ್ನ ಇಲ್ಲೋ ನಿಂದ ಅಂತ ಬರೇ ನನ್ನ ಬಯ್ಯಕೊಂತ ಕುಂತಿರತಾಳಾ ಹಿ ಹಿ ಹೆಸರ ಎನ ಹೇಳಾಂಗಿಲ್ಲಾ ಅವರದ ಇಲ್ಲಾ ಅಂದ್ರ ನನ್ನ ಗತಿ ಅದೋ ಗತಿ...ಶೀವನೆ ಶಂಭೊಲಿಂಗಾ.. ಆಗಿ ಬಿಡತೇತಿ. ಆದ್ರನೂ ಇ ಸಲಾ ಎಲ್ಲಾ ಸರಿಯಾಗಿ ಟೈಮ ಗಿನಾ ಆಗಿತ್ತಾ..ದೇವರ ದಯೆ ನಮ್ಮ ದೊಡ್ಡವ್ರದ ದಯೆ. ....ನಮ್ಮ ಆನೆಕಲದ ಪಯಣ, ಬೆಳಿಗ್ಗೆ ೭ ಗಂಟೆಗೆ ನವರಂಗ ವೃತ್ತದಿಂತ ಶೂರೂ ಆಯ್ತ....ಆಮೇಲೆ ಮುಂದ ಕೋರಮಂಗಲಕ್ಕ ಹೋಗಿ ಗಾಡಿ ನಿಂತಿತಾ, ಮಸ್ತ ಪೈಕಿ ನಾಸ್ಟಾ ಮಾಡಿದು ಕರ್ರಿ ಲಿಪ ನ್ಯಾಗ....ಸಾದಾ ಹಾಂವಾಗಿ ಎಲ್ಲಾರೂ ಮುಂದ ನಡದೂ...

ಆದ್ರ ಇನ್ನ ಶೂರೂನೂ ಮಾಡಿರಾಕಿಲ್ಲಾ ಮಂಗ್ಯಾನ ಆಟಾ ಸ್ಟಾರ್ಟ ಆಗಿತ್ತ ಅಲ್ಲಿ ಹಿಂದ, ನೊಡಿರ್ರ ವಡಗಾಂವಿ ರವ್ಯಾ ಪತ್ತೆ ಇಲ್ಲಾ, ನಾವ ಎಲ್ಲಾರೂ ಪೆಟ್ರೊಲ ಹಾಕಸಾಕಂತ ನಿತ್ತೇವಿ ಮಡಿವಾಳ ಕಡೆ ಇಂವಾ ಕಾನಸವಾಲ್ಲ... ಮತ್ತ ಪೋನ ಮಾಡಿ ಇಲ್ಲಿ ಬಾ ಅಲ್ಲಿ ಬಾ ಅಂತ ಹೇಳಿದು ಯಾಕಂದ್ರ ಹುಡುಗ ಬೆಂಗಳೂರಿಗಿ ಅವಾಗಾ ಅವಾಗ ಬಂದಿದ್ದ, ಹೊಸಬ ರೋಡ ಸರಿಯಾಗಿ ಗೊತ್ತಿಲ್ಲಾ..ಆಮೇಲಿ ಒಂದ ೧೫ ನಿಮಿಷ ಆದ ಮ್ಯಾಲ ಬಂದಲಾ ಚಿ..ಹಂಗ ಒಬ್ಬಬ್ರ ಆಗಿ ಎಲ್ಲಾರೂ ಬರಾಕ ಸೂರೂ ಮಾಡಿರ್ರಪಾ....ಆತ ಮತ್ತ ಇನ್ನೊಂದ ಸಲಾ ದೊಡ್ಡದ ಒಂದ ವಾರ್ನಿಂಗ ಎಲ್ಲಾರಿಗೂ ಇಗಾರ ಸುದರರ್ಸಲೇ...ಬಿಡ್ರಿ ಅದ ಮಂಗ್ಯಾನ ಆಟಾನಾ....ಅಂತ ಹೇಳಿತಾ

ಆಮೇಲೆ ಹೇಳಿದು ಎಲ್ಲಾರು ಇಲ್ಲಿ ಬಿಟ್ಟು ಅಂದ್ರ ಮುಂದ ಟರ್ನಿಂಗನ ಪಾಯಿಂಟ ಗಿನಾ ಸಿಗುನಾ ಅಂತಾ, ಅದ ಆದ ಮ್ಯಾಲೆ ಸಿದಾ ಆನೆಕಲನ ಸ್ಟೊಪ...ಇಶ್ಟ ಹೇಳಿ ಶೂರೂ ಮಾಡಿದೂ ನೋಡ ನಮ್ಮ ಜೀವನದ ಮರೆಯಲಾಗದ ಬೈಕ ರೈಡನಾ....

ಕಾಕಾ ಇ ಟ್ರಿಪ ಸಮಂದ ತನ್ನಾ ಹೆಲ್ಮೆಟನ್ನ ತಯಾರ ಮಾಡಿದ್ದ (ಹಾಂ ಹಾಂ ಅದ ಹೇಲ್ಮೆಟಪಾ ಅತರ ಮ್ಯಾಲ ೧ ಕೇ.ಜಿ ಧೂಳಾ ಕುಂತಿದ್ದ, ಹಾಂ ಹಾಂ ಅದಾ ಅದರ ಮ್ಯಾಲ ಜೊಂಡಗ್ಯಾ ಸದೆಕ ಅಡ್ಯಾಡಾಕ ಹೇದರತಿತ್ತಾ, ಹಿ ಹಿ ಭಾಳ ಆತಾ...) ಆದ್ರ ಲಾಸ್ಟಗಿ ಅದನ್ನ ತೊಗೊಂಡ ಬರಲೆ ಇಲ್ಲಾ ಚೆ ಚೆ....ಪುಲ್ಲ ಎಲ್ಲಾರೂ ಮನಗಂಡ ತಯಾರ ಆಗಿ ಬಂದಿರ್ರ (ಎನೋ ಅದ ಏನ ಟ್ರೆಕ್ಕಿಂಗಿ ಬಂದಿರ್ರೊ ಎನ ಪಾರ್ಕನ್ಯಾಗಾ ಕುಂಡ್ರಾಕೊ...) ಎಷ್ಟ ಹೇಳಿರೂ ಸ್ವಲ್ಪ ಹುಡಗೊರ ವಿತೌಟ ಜಿನ್ಸ್, ಪುಲ್ಲ್ ಸ್ಲಿವ ಶರ್‍ಟ, ಬಂದಿರ್ರ ಮತ್ತ ಹುಡಗ್ಯಾರನು ಎನ ಕಡಿಮಿ ಇಲ್ಲಾ ಅವರೂ ಅವರಾ. ಎನ ಮಾಡಾಕ ಆಗತೇತಿ ಪಕ್ಕಾ ಡವಗಾ ಗ್ಯಾಂಗಲಾ....ನನ್ನು ಹಿಡ್ಕೊಂಡನ್ನ ಯಾಕ ಅಂದ್ರಾ ನಾನು ಹಾಪ ಸ್ಲಿವ ಟಿ-ಶರ್‍ಟ ಹಾಕೋಂಡಿದ್ದಿನಿ..(ಆಚಾರ ಹೇಳಾವ್ರ ಮದಲ ಬದನಿಕಾಯಿ (ಹಾಂ ಬದನಿಕಾಯಿ ಇಇಇಇಇ ಬಾಯಾಗ ನೀರ ಬಂದು ನನಗ ಇದರ ಹೆಸರ ಕೇಳಿ)...ತಿನ್ನತಾರ ಅಂತ..

ನಮ್ಮ ಬಾಲಕ ಮದಲನಾ ಭಾಳ ಪ್ರಸಿದ್ದಿ ಪಡೆದುಕೋಂಡಿದ್ದಾ ಬೈಕ ರ್‍ಯಾಶಾಗಿ ಹೋಡಿತಾನ ಅಂತ, ಸೊ ಮದಲ ಮದಲ ಅವನ ಹಿಂದ ಕುಂಡ್ರಾಕ್ಕ ಭಾಳ ಹೆದರಾತಿರ್ರ ಆದ್ರ ನಮ್ಮ ಡೇರ ಡೇವಿಲ ಪಲ್ಲಿ_ಗುಲ್ಲಿ ಗಟ್ಟಿ ಮನಸ ಮಾಡಿ ಕುಂತ ಬಿಟ್ಟಳಾ....ನನ್ನ ಹಿಂದ ನನ್ನ ಚೇಲಿ ಕುಸುಮಿ ಕುಂತಳ. ಮತ್ತ ಅಕಿ ಕಡೆ ಕ್ಯಾಮೇರಾ ಕೊಟ್ಟಬಿಟ್ಟಿನ್ನಿ ನಾನಂತಿ...ಮತ್ತ ಸ್ಪೇಶಲ ವಾರ್ನಿಂಗನು ಕೊಟ್ಟಿತ್ತಾ ಪೊಟೊ ಮಸ್ತ ಬರಬೇಕಂತ...

ಮಸ್ತ ಎಲ್ಲಾರೂ ಬಾಂವ ಬಾಂವ ಅಂತ ಬೈಕ ಒಡಿಸಿರ್ರ ಆನೆಕಲ ಮುಟ್ಟಿದಿವಿ ಜಲ್ದಿನಾ. ನಮ್ಮ ಗೈಡ ಕಮ ಸೆಕ್ಯುರಿಟಿಗಿ ಫೋನ ಮಾಡಿ ಕರದೂ ಮತ್ತ ಮದಲ ಟೇಲರ ಕಡೆ ಹೊದು. ನಾನ, ಬಾಲಕ, ಕಾಕಾ ಮಾಪ ಕೊಟ್ಟು ಪ್ಯಾಂಟದ. ಆಮೇಲೆ ಎಲ್ಲಾರದೂ ಕುಡಿ ಒಂದ ಪೊಟೊ ಸೇಸನ ಆತ ಅಲ್ಯಾ...



ಆಮೇಲೆ ನಮ್ಮ ಗೈಡ ಹೇಳಿದಾ ಇಲ್ಯಾ ಊಟಾ ಕಟ್ಟಕೋಂಡ ಹೋಗಬೇಕಂತ ಅಲ್ಲಿ ಎನು ಸಿಗಾಂಗಿಲ್ಲಾ ಅಂತ. ಆಯಿತಾ ಅಂತ ಹೇಳಿ ಎಲ್ಲಾರೂ ಗಾಡಿ ತಗದು ಹೋಟೆಲ ಕಡೆ ಹೋದು. ಅಲ್ಲಿ ಚಪಾತಿ ಮತ್ತ ಭಾಜಿ ಕಟ್ಟಗೊಂಡ ನಮ್ಮ ಪಯನದತ್ತ ನಡದು.

ಮಸ್ತ ಬೈಕ ರೈಡ ಮಾಡಕೋಂತ ಬಾಂವ ಬಾಂವ ಅಂತ ನಾ ಮುಂದ ನಿ ಮುಂದ ಅಂತ ಸ್ಪರ್ಧೆ ನ ಸ್ಪರ್ಧೆ....ಅತರಾಗ ನಮ್ಮ ಗೈಡ ವಾರ್ನಿಂಗ ಕೊಟ್ಟ ಕೊಟ್ಟ ಬ್ಯಾಸರ ಆದ. ಲಾಸ್ಟ ಲಾಸ್ಟಗಿ ಅಂತು ಅವಾಂ ಗೋಳ್ಳ ವಗ್ಯಾಕ ಸೂರೂ ಮಾಡಿದಾ..ಎನ ಅಂದ್ರ ಇಲ್ಲಿ ಕಾಡ ಆನೆಗೋಳ ಅದಾವಾ ರೋಡ ನಡಕನ ಬಂದ ಬಿಡತಾವಾ. ಎಚ್ಚರಿಕೆಯಿಂದ ಗಾಡಿ ಸ್ಲೊವ ಹೋಡಿರಿ ಅಂತಾ....




ಆದ್ರ ಗೊತ್ತಲಾ ನಮ್ಮ ಶೇಂಗಾ ಮಂದಿ ಎನ ಪರಕನು ಇಲ್ಲಾ ಮಂಚನು ಇಲ್ಲ (ಪರ್‍ಕ ಮತ್ತು ಮಂಚ ಚೊಕೊಲೆಟ)..ತಮ್ಮ ಶೇಂಗಾಗಿರಿನ್ನ ಮಾಡಕೊಂತ ನಡದಿರ್ರಾ....ಲಾಸ್ಟಗಿ ಅವನಿಗೆ ಇಶ್ಟ ಸಿಟ್ಟ ಬಂತಲಾ ಅಂತಿ ಮುಗಿತಾ ಬೈದ ಬಿಟ್ಟಾ ಅವಾಂ, ಎನ ಡವಗಾ ಮಂದಿನೊ ಅಂತಾ....ಹಿ ಹಿ...ಅದ ಆದ ಮ್ಯಾಲೆ ನಂದಾ ನೊನಸೆಂಸಂದಾ ಮಾತಿನ ಚಕಮಕಿನು ಆತಾ....ಸ್ವಲ್ಪ ನಾನು ಸಿಟ್ಟ ಆಗಿನ್ನಿ ಮತ್ತ ಹೇಳಿನಿ ಅವಂಗಾ ಎಲ್ಲರು ಕುಡಿ ನಡಿರಿಪಾ ಅಂತ...ಎಲ್ಲಾರೂ ಪೂರ್‍ತಿ ಘಾಭ್ರಿ ಆದ್ರ ಎನ ಶೇಂಗಾಮ್ಯಾನ ಸಿರಿಯಸ ಆಗ್ಯಾನಲಾ ಅಂತಾ......ಕುಸುಮಿ ಅಂತಿ ಒಂದ ೧೦೦ ಸಲಾ ಕೇಳಿದ್ದಾ ಕೇಳಿದ್ದಾ ನೀ ಸಿರಿಯಸ ಆಗಿದ್ದಿ ಎನಿಲ್ಲಾ ಅಂತ, ನೀ ಸಿರಿಯಸ ಆಗಿದ್ದಿ ಎನಿಲ್ಲಾ ಅಂತ..ಹಿ ಹಿ.
ಆದ್ರ ನಾನ ಸ್ವಲ್ಪ ಸಿರಿಯಸ ಆಗಿನ್ನಿ ಆದ್ರ ಅಶ್ಟೂನು ಅಲ್ಲಾ...

ಆಟಲಾಸ್ಟ ನಮ್ಮ ಗುರಿ ಮುಟ್ಟಿದೂ ಮದ್ಯಾನ ರಣಾ ರಣಾ ಬಿಸಿಲ ನ್ಯಾಗಾ...



ನನ್ನ ಗಾಡಿ ಪಾರ್ಕ ಅಲ್ಯ ರೋಡ ಸೈಡಗಿ ಮಾಡಿನಿ..ವಳ್ಳಿ ನೋಡಿನಿ..ಮಸ್ತಪೈಕಿ ಒಂದ ವಿಶಾಲವಾದ ಪರ್ವತ ಮ್ಯಾಲೆ ನಾವ ನಿಂತೇವಿ ನಮ್ಮ ಮುಂದ ಇನ್ನೋಂದ ಪರ್ವತ. ಎರಡರದು ನಡಕ ಇಳಿಜಾರು. ನಾವೆಲ್ಲಾರೂ ಇ ನಿಂತ ಪರ್ವತ ಮ್ಯಾಲಿಂದ ಕೆಳಗಡೆ ಇಳಿದಾ ಕಾಡವಳಗ ಹೋಗಬೆಕಾಗಿತ್ತಾ.....ಅದು ಅಶ್ಟ ಪುಲ್ಲ ಕಾಡನು ಅಲ್ಲಾ, ಆ ಪರಿ ದೊಡ್ಡು ದೊಡ್ಡು ಗಿಡಗೋಳ ಇರಾಕಿಲ್ಲಾ ಆದ್ರ ಪೂರ್‍ತಿ ಸನ್ನ ಸನ್ನ ಗಿಡಗೋಳ ಎಲ್ಲಾ ಕಡೆ ಹಬ್ಬಿ ಬೇಳದ ಬಿಟ್ಟಿದ್ದು...ಎನೋ ಅನ್ನರಿ ಖರೆ ಟ್ರೆಕ್ಕಿಂಗ ಮಾಡಾಕ ಸರಿಯಾದ ಜಾಗಾ ಅದೂ....ನಮ್ಮ ಗೈಡ ಹೇಳಿದಾ ರೋಡಸೈಡ ಗಾಡಿ ಪಾರ್ಕ ಮಾಡೂದ ಸರಿ ಅಲ್ಲಾ, ಅದಕ್ಕಾ ನಡು ಹೋಲದಾಗ ಒಂದ ಮನಿಯಿತ್ತಾ ಅಲ್ಲಿ ಪಾರ್ಕ ಮಾಡೂನಾ ಅಂತ ಹೇಳಿದಾ. ನಾವು ಎಲ್ಲಾರು ಆಯಿತ ಅಂತ ಹೇಳಿ ಗಾಡಿ ಹೋಲದಾಗ ಹಾಕಿದಿವಿ ಗರ್ರ ಗರ್ರ ಅಂತ ಇಳದು...ಒಂದ ಕಡೆ ಎಲ್ಲಾರು ಪಾರ್ಕ ಮಾಡಿದೂ. ಅಲ್ಲಿ ಕೈಯಲ್ಲಿ ಎನುಸು ಅಶ್ಟ ಮನಿಗೋಳ ಇದ್ದು...ಪಕ್ಕಾ ಬುಡಗಟ್ಟು ಜನಾಂಗದವ್ರ ಇದ್ರ, ಅದ ಹಳೆ ಶೈಲಿ ಮನಿಗೋಳಾ. ನಾವೆಲ್ಲಾರು ಕೂಡಿ ಹಂತಾದನ ಮನಿ ಕಡೆ ಹೋದು, ಮತ್ತ ಊಟದ್ದ, ನೀರಿಂದ ಬ್ಯಾಗಗೋಳನ್ನ ಬಿಟ್ಟ ಎಲ್ಲಾ ಬಾಕಿ ವಸ್ತುಗೋಳನ್ನ ಅದ ಮನ್ಯಾಗ ಇಟ್ಟು. ಯಾಕ ಅಂದ್ರ ಮದಲಾ ಬಿಸಿಲ ಭಾಳ ಇತ್ತ ಮತ್ತ ಅಷ್ಟ ವಜ್ಜೆದ್ದ ಸಾಮಾನಗೋಳನ್ನ ತೋಗೊಂಡ ಹೋಗೂದಾ ಉಪಯೋಗಕ್ಕ ಬರತಿರಾಕಿಲ್ಲಾ.

ಆ ಮನ್ಯಾಗ ಒಂದ ಪುಟ್ಟ ಪುಟಾನಿ ಇದ್ದಳ..ಮುಗ್ದತೆ ತುಂಬಿಕೋಂಡಿರುವ ಆ ಪುಟಾನಿಯ ಮೋಗವು...ಆಹಾ....ಮನಮೋಹಕವಾಗಿತ್ತು. ಬಡತನದ ಬದುಕು ಹೇಂಗ ಇರತೇತಿ ಅಂತ ಅಕಿನ್ನ ಮೋಗದ ಮೇಲೆ, ಆಕೆ ಹಾಕೋಂಡಿರುವ ಅರಿವಿ ಮ್ಯಾಲ ಗೊತ್ತಾಗಾತಿತ್ತ...ಪ್ರಪಂಚದ ಧ್ಯಾನ ಇರದ ಪುಟಾನಿ ನಾವು ಕ್ಯಾಮರಾ ದಿಂತ ಚಿತ್ರ ತಗ್ಯಾಕ ಶುರು ಮಾಡಿಮ್ಯಾಲ ತನ್ನದೆ ಆದ ವಿಷಿಶ್ಟ ಶೈಲಿಯಲ್ಲಿ ಮುಗುಳ್ನಗೆಯನ್ನು ಕೊಟ್ಟಳು.

ಮೇಲೆ ನಮ್ಮ ಪದಯಾತ್ರೆಯನ್ನು ಶೂರು ಮಾಡಿದ್ವಿ...ನಮ್ಮ ಗೈಡ ಪಕ್ಕಾ ಸುಳ್ಳರ ಸರದಾರಾ ನಮಗ ಎನೇನೊ ಕಟ್ಟ ಕತಿಗೋಳ ಹೇಳಕೊಂತ ವಂಟಿದ್ದಾ, ನಡು ಹಾದ್ಯಗೆಲ್ಲಾ ನಮಗೇಲ್ಲಾ ಹೆದರಸಾತಿದ್ದಾ ಇಲ್ಲಿ ಆನೆಗೋಳ ಅದಾವಾ, ಕಾಡ ಪ್ರಾಣಿಗೋಳ ಅದಾವಾ ಅಂತ...ಮದಲ ಮದಲ ಅಂತಿ ಎಲ್ಲಾರು ಎನ ಸುಳ್ಳ ಹೇಳತಾನಾ ಅಂತಾ ಮಜಾಕ ಉಡಾಸಾತಿದ್ರ...ಒಂದ ಕುರಿ, ಆಡಾ ನೊಡಿರ್ರ ಹುಲಿ ಬಂತಾ ಆನಿ ಬಂತಾ ಅಂತಾ ನಗೆಹನಿ ಮಾಡಾತಿರ್ರಾ ಎಲ್ಲಾರು..ಆದ್ರ ಒಮ್ಮೆ ಕಾಡವಳಗ ಹೋದ ಮ್ಯಾಲೆ...ನಾವ ಖರೆನಾ ಆನಿ ಕಾಲಿನ ಪದ ಚಿನ್ಹೆಗಳನ್ನು ನೋಡಿದು...

ನಾ ಅಂತಿ ಪುಲ್ಲ ಖುಶ....ಪಿಚರ್ರ ತಗದಿದ್ದಾ ತಗದಿದ್ದಾ..



ಪೂರತಿ ಇಳಜಾರ ಇತ್ತಾ ನಾವ ಹೋಗು ದಾರಿ..ಹೋಗಬೇಕಂದ್ರನ ಒಬ್ಬ ಒಬ್ಬರ ಬಿಳ್ಳಾಕ ಸುರು ಮಾಡಿರ್ರ ನೋಡ...ಕುಸುಮಿ, ಪಲ್ಲಿ, ನೊನಸೆಂಸ ನಾನ ಎಲ್ಲಾರು ಒಂದ ಒಂದ ಸಲಾ ಬಿದ್ದೂ....ಭಾಳ ಮಜಾ ಬರಾತಿತ್ತ ನನಗ ಅಂತಿ...ಪರ್ರ ಪರ್ರ ಅಂತ ಜಾರಿ ಬಿಳ್ಳಾತಿರ್ರ ಎಲ್ಲಾರು...ಹಿ ಹಿ. ಎಲ್ಲಾರು ಒಂದೊಂದ ಕಟ್ಟಿಗೆ (ಕೋಲು) ಹಿಡ್ಕೊಂಡಿರ್ರಾ ಎನಪಾ ಎನು ಮೌಂಟ ಎವರೆಸ್ಟ ಹತ್ತಾವ್ರ ಗತೆ... ಅರಾಮಸೇ ಇಳಕೊಂತ ಒಂದ ಮಸ್ತ ಪೈಕಿ ಕೊಳ್ಳದ ಕಡೆ ಕರ್ಕೊಂಡ ಹೋದ ನಮನ್ನೇಲ್ಲಾ ನಮ್ಮ ಗೈಡ, ಅಲ್ಲಿ ಎಲ್ಲಾ ಪ್ರಾಣಿಗೋಳ ನೀರ ಕುಡ್ಯಾಕ ಬರತಾವ ಅಂತ ಹೇಳಿದಾ, ಸ್ವಲ್ಪ ಮಂದಿ ಅದಕ್ಕ ನಕ್ರ, ಸ್ವಲ್ಪ ಮಂದಿ ಸಿರಿಯಸ ಆಗಿ ತೋಗೊಂಡ್ರ. ಎಲ್ಲಾರು ಅಲ್ಯನಾ ಸ್ವಲ್ಪ ಟೈಮ ಪಾಸ ಮಾಡುನಾ ಅಂದ್ರ...




ಆ ಕೊಳ್ಳದ ನೀರ ಮಸ್ತ ತಿಳಿ ಅಂದ್ರ ತಿಳಿ ನೀರ ಇದ್ದು, ಭಾಳಾ ಸನ್ನದ ಅದ ಕೊಳ್ಳ..೩ ಕಡೆಂದನು ಕಪ್ಪು ಕಲ್ಲ ಸುತ್ತ ವರದಿದ್ದು ನಡಕ ಚಕಮಕ ಅಂತ ಹೊಳಿಯುವ ನಿಂತ ನೀರು...ಸುರ್ಯನ ಕಿರಣ, ತಿಳಿ ನೀರನ್ನ ಛೀರಕೋಂತ ತಳಾ ಮುಟ್ಟಾತಿತ್ತ... ಅದರಾಗ ಒಂದ ಕಪ್ಪಿ ಇತ್ತ ನಾ ಅದರ್ರ ಪೊಟೊ ತೆಗ್ಯಾಕ ಸುರು ಮಾಡಿನಿ...ಬಾಕಿ ಜನಾ ನಿರೋಳಗ ಇಳ್ಯಾಕ ಸುರು ಮಾಡಿರ್ರ...ಒಬ್ಬ ಒಬ್ರ ಅಂತ ಎಲ್ಲಾರು ಇಳುದು....ನೀರಾಗ ಡುಬುಕಿ ವಡ್ಯಾಕ ಶೂರೂ ಮಾಡಿದು. ಯಾರ ಇಳಿಲಿಲ್ಲಾ ಅವರ ಮ್ಯಾಲೆ ನೀರ ಗ್ವಜ್ಜಿದ್ದಾ ಗ್ವಜ್ಜಿದ್ದ....ಕಾಕನ್ನ ಒಂದ ಸಲಾ ನೀರಿನ್ಯಾಗ ಹಾಕ್ಕಿ ಮುಳಿಗಿಸಿತಾ...ಆಮೇಲೆ ಬಬ್ಲಿ ಬಾರಿ.

ಎಲ್ಲಾರು ವಟ್ಟ ಕುಡಿ ನೀರಾಗ ಇಳದು....ಆಶ್ಚರ್ಯದ ವಿಷಯ ಅಂದ್ರ ನಮ್ಮ ಡುಮ್ಮಿ ಪಲ್ಲಿ_ಗುಲ್ಲಿ ಒಮ್ಮೆ ಬಂದಾಕಿನ ನೀರಾಗ ಇಳದ ಈಜಾಡಾಕ ಶುರು ಮಾಡಿಳ....ಎಲ್ಲಾರು ಗಾಭರಿ ಆಗಿ ಬಿಟ್ರ (ಎಲ್ಲಾ ನೀರ ವರಗ ಬಂದ ಗಿಂದಾವ ಅಂತ..ಹಿ ಹಿ)..ಎಲ್ಲಾರು ಮಸ್ತ ಮಜಾ ಮಾಡಿದು ನೀರಾಗ ಈಜಾಡಿ, ಕುಣಿದಾಡಿ, ಚಿರ್‍ಯಾಡಿ, ನೀರ ಗೊಜ್ಯಾಡಿ..ಹಿ ಹಿ.

ಮಸ್ತ ತಿಳಿ ನೀರ ಇದ್ದಿದ್ದ ಕೊಳ್ಳನ್ನ ಇಷ್ಟ ಕೆಡಿಸಿ ಬಂದ್ರಲ್ಲಾ ಅಲ್ಲಿ ಯಾವ ಪ್ರಾಣಿನು ನೀರು ಕುಡ್ಯಾಕ ಹೊಗಿರಬಾರದ ಹಂಗ ಮಾಡಿರ...ಹಾ ಹಾ.

ಇಶ್ಟೆಲ್ಲಾ ಆಟಾ ಆಡಿ ಮ್ಯಾಲಾ ಎಲ್ಲಾರಿಗು ಹಸೀವು ಆತ....ಬ್ಯಾಗ ಚೇಕ ಮಾಡಿರ್ರ ಗೊತ್ತ ಆತಾ ಊಟದ್ದ ಬ್ಯಾಗ ಅಲ್ಲೆ ಮನ್ಯಾಗ ಬಿಟ್ಟ ಬಂದೇವಿ ಅಂತ..ಎಪ್ಪಾ ಆಮೇಲೆ ಎನ ಹಂಗಾ ಹೊಟ್ಟಿ ಹುರಿಸಿಕೋಂತ ಬೆಟ್ಟ ಹತ್ತಾಕ ಶುರು ಮಾಡಿದು..ಎಲ್ಲಿ ನಮ್ಮು ವಸ್ತುಗೊಳನ್ನ ಇಟ್ಟಿದ್ದು ಆ ಮನಿಗಿ ಕಡೆ ಬೆಟ್ಟ ಹತ್ತಿ ಹೋರಟು..

ಬರಬೇಕಾದ್ರ ನಾವು ಒಂದು ಹಳ್ಳಿ ಮನೆ ಕಡೆಂದ ಬರತಿದ್ದು. ಅಲ್ಲಿ ಓಂದು ಪುಟ್ಟ ಆಡಿನ ಮರಿ ಇತ್ತ. ಅದನ್ನ ಬಬ್ಲಿ ನೊಡಿದ್ದಾಕಿನ ಎತ್ತಕೋಂಡಳಾ...ಕೇವಲ ೩ ದಿನದ ಹಿಂದೇನೆ ಇ ಪುಟಾಣಿಯ ಜನ್ಮ ಆಗಿತ್ತ...ಭಾಳ ಸುಂದರ ಮತ್ತು ಮುಗ್ದ ಮೋಗ ಇತ್ತ ಅತರದ. ನಾನು ನನ್ನ ಪೊಟೋಗ್ರಾಫಿ ಟ್ಯಾಲೆಂಟನ್ನ ತೋರಿಸಿದ್ನಿ...ಮಸ್ತಂದ ಒಂದ ಚಿತ್ರ ತಗದನಿ....ಇಲ್ಲಿವರೆಗೆ ತೆಗೆದ ಚಿತ್ರಗಳಲ್ಲಿ ಇದು ನನ್ನ ಅತ್ಯುತ್ತಮ ಚಿತ್ರಗಳಲ್ಲಿ ಒಂದು.

ಮನಿ ಮುಟ್ಟಿ ಮ್ಯಾಲ ಎಲ್ಲರು ಸುಧರಿಸಿಕೊಳ್ಳಾಕ ಶುರು ಮಾಡಿರ್ರ. ನಮ್ಮ ಗೈಡ ಆ ಮನ್ಯಾಗಿಂದ ಒಬ್ರ ಹೆಂಗಸಗ ಹೇಳಿ ಅಡಿಗಿ ಮಾಡಿಸಿರ್ರ....ಮತ್ತೆನ ಮದಲ ಎಲ್ಲಾರು ಹಸಿವಲೆ ಸಾಯತಿರ್ರ..ಎಲ್ಲಾರು ತಿನ್ನಾಕ ತಯಾರ ಆದ್ರ. ಮಸ್ತ ಪೈಕಿ ಮಸಾಲಾ ರೈಸ ಮಾಡಿರ್ರ ಎಲ್ಲಾರು ಖಾಸ ಖಾಸ ತಿಂದು..ನಮಗ ಅಷ್ಟ ಮುಚ್ಚಿ ನಮ್ಮ ಗೈಡ ಶರಬತ ಕೊಟ್ಟ...ನಾನು, ಬಬ್ಲಿ ಪಟಕನ ಎಲ್ಲಾ ಕುಡದ ಎನು ಗೊತ್ತಿಲ್ಲದಾವ್ರ ಗತೆ ಕುಂತು..ಹಿ ಹಿ.

ಎಲ್ಲರು ಹೊಟ್ಟಿ ತುಂಭಿ ಮ್ಯಾಲಾ ಅಬ ಅಂತ ಅಂದ್ರ...ಎಲ್ಲಾರು ವಾಪಸ ಮರಳಿ ಗುಡಿಗೆ (ಬೆಂಗಳೂರು) ಹೋಗಾಕ ತಯಾರ ಆದ್ರ...ನಾವೆಲ್ಲರು ಕುಡಿ ಸ್ವಲ್ಪ ರೊಕ್ಕಾ ಕೊಟ್ಟು ಆ ಪುಟ್ಟ ಹುಡುಗಿ ಕೈಯಾಗ.

ಮತ್ತ ವಾಪಸ ಬಾಂವ ಬಾಂವ ಅಂತ ಗಾಡಿ ವಡ್ಯಾಕ ಶುರು ಮಾಡಿದು..ಹೊಸುರ ರೋಡ ಮ್ಯಾಲ ನಂದಾ ಮತ್ತ ಸಚ್ಯಾಂದ ಬೈಕ ರೇಸ ಹತ್ತಿತ್ತಾ...ಮಸ್ತ ಇಬ್ಬ್ರು ಕಟ ಹೊಡಕೋಂತ....ಹೋಂಟಿದ್ದು...ಲಾಸ್ಟಿಗಿ ನಾನ ಮದಲ ಬನ್ನಿ....ಹಿ ಹಿ ...ಹುರ್ರೆ ಹುರ್ರೆ...ಜಿಂಗ ಚಾಕ ಜಿಂಗ ಜಿಂಗ ಚಾಕ...ಮಸ್ತ ಮನಿಗಿ ಬಂದ ಮ್ಯಾಲ ಡ್ಯಾಂಸ ಮಾಡಿದು...

ಧನ್ಯವಾದಗಳು ಎಲ್ಲಾ ಶೇಂಗಾ/ಡವಗಾ ಮಂದಿಗೆ....ಒಂದು ಮರೆಯಲಾಗದ ಪ್ರವಾಸವನ್ನಾಗಿ ಮಾಡಿ, ನಮ್ಮೇಲ್ಲರ ಮನಸ್ಸಿನಲ್ಲಿ ಮನೆ ಮಾಡೋದಕ್ಕೆ.....